alex Certify ಈ ರಾಶಿಯವರಿಗೆ ಕಾದಿದೆ ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಕಾದಿದೆ ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ

ಮೇಷ : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅತಿಯಾದ ಖರ್ಚನ್ನು ಹೊರಬೇಕಾಗಿ ಬರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಅಂದುಕೊಂಡ ಕಾರ್ಯಗಳು ನಿಗದಿತ ಸಮಯದಲ್ಲಿ ಈಡೇರುವುದಿಲ್ಲ. ಇದು ನಿಮ್ಮನ್ನು ನಿರಾಶೆಗೆ ದೂಡಲಿದೆ.

ವೃಷಭ : ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇದರಿಂದ ನೀವು ಚಿಂತೆಗೆ ಒಳಗಾಗುವಿರಿ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನ ಸಾಧಿಸಲಿದ್ದಾರೆ. ಕಚೇರಿಯಲ್ಲಿ ನಿಮಗೆ ಯೋಗ್ಯವಾದ ವಾತಾವರಣ ಇರಲಿದೆ.

ಮಿಥುನ : ಅನಾರೋಗ್ಯಕ್ಕೆ ಒಳಗಾಗಿರುವ ನಿಮ್ಮ ಸಂಗಾತಿಗೆ ನಿಮ್ಮ ಆರೈಕೆಯ ಮೊದಲ ಮದ್ದಾಗಿದೆ. ಹೀಗಾಗಿ ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಿ. ಸ್ತ್ರೀಯರಿಂದ ನಿಮಗೆ ನಷ್ಟ ಉಂಟಾಗಬಹುದು. ಸುಬ್ರಹ್ಮಣ್ಯ ದೇವರನ್ನು ಆರಾಧಿಸಿ.

ಕಟಕ : ಜವಳಿ ಉದ್ಯಮಿಗಳು, ಹಣ್ಣು ವ್ಯಾಪಾರಿಗಳಿಗೆ ಇಂದು ಅನಿರೀಕ್ಷಿತ ಲಾಭ ಕಾದಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಸನ್ಮಾನ ದೊರಕಲಿದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ.

ಸಿಂಹ : ಹೊಸ ಮನೆ ನಿರ್ಮಾಣದತ್ತ ಒಲವು ತೋರಲಿದ್ದೀರಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಕಚೇರಿಯಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

ಕನ್ಯಾ : ವಿದೇಶಿ ಪ್ರಯಾಣದ ಅವಕಾಶ ಕೂಡಿ ಬಂದರೂ ಸಹ ಹಣದ ಕೊರತೆಯಿಂದಾಗಿ ಆಸೆಯನ್ನು ಮೊಟಕುಗೊಳಿಸಬೇಕಾಗಿ ಬರಲಿದೆ. ಮನೆಯ ಕಿರಿಯ ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡಲಿದ್ದಾರೆ.

ತುಲಾ : ಮೇಲಾಧಿಕಾರಿಗಳ ವಿಶ್ವಾಸ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಲಿದ್ದೀರಿ. ಆದರೂ ಸಂಜೆ ವೇಳೆಗೆ ಕಚೇರಿಯಲ್ಲಿ ನಿಮಗೆ ಅಪಮಾನ ತಪ್ಪಿದ್ದಲ್ಲ. ಸಂಗಾತಿಯ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ವ್ಯಾಪಾರಿಗಳಿಗೆ ಇಂದು ಮಿಶ್ರ ಫಲವಿದೆ.

ವೃಶ್ಚಿಕ : ನಿಮ್ಮ ಜೀವನದಲ್ಲಿ ಧನ – ಕನಕಕ್ಕೆ ಯಾವುದೇ ಅಭಾವವಿಲ್ಲ. ಆದರೆ ಮನಶ್ಶಾಂತಿ ಇಲ್ಲದ ಹಿನ್ನೆಲೆಯಲ್ಲಿ ಕೊರಗಲಿದ್ದೀರಿ. ಎಲ್ಲಾ ಇದ್ದರೂ ಏನಿಲ್ಲದಂತೆ ಬದುಕಲಿದ್ದೀರಿ. ಮಕ್ಕಳು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ. ಕೆಲಸಕ್ಕೆ ತಕ್ಕ ಪ್ರತಿಫಲ ನಿಮ್ಮದಾಗಲಿದೆ.

ಧನು : ಮನೆಯಲ್ಲಿ ಇಂದು ಅನುಕೂಲಕರ ವಾತಾವರಣ ಇದೆ. ಹೀಗಾಗಿ ನಿಮ್ಮ ಪ್ರೇಮ ಸಂಬಂಧದ ಬಗ್ಗೆ ಹಿರಿಯರ ಎದುರು ಪ್ರಸ್ತಾಪ ಮಾಡುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಮಕರ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.

ಕುಂಭ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.

ಮೀನ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...