alex Certify ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು ಪುಂಡಾಟಿಕೆ: ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು ಪುಂಡಾಟಿಕೆ: ಪ್ರಶ್ನಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ವೇಳೆ ಪುಂಡರು ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಸ್ತೆಯಲ್ಲಿ ಓಡಾಡುವವರ ಮೇಲೆ ಪಟಾಕಿ ಎಸೆದು ವಿಕೃತ ವರ್ತನೆ ತೋರುತ್ತಿದ್ದ ಕಿಡಿಗೇಡಿಗಳು ಇದೇ ರೀತಿ ವ್ಯಕ್ತಿಯೊಬ್ಬನ ಮೇಲೆ ಪಟಾಕಿ ಹಚ್ಚಿ ಎಸೆದಿದ್ದಾರೆ. ಪ್ರಶ್ನಿಸಿದಾಗ ಕುತ್ತಿಗೆ ಮೂಳೆ ಮುರಿಯುವಂತೆ ಥಳಿಸಿದ್ದಾರೆ.

ಜ್ಞಾನಭಾರತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರುತಿ ನಗರದಲ್ಲಿ ತಡರಾತ್ರಿ ಯುವಕರ ತಂಡವೊಂದು ಪಟಾಕಿ ಸಿಡಿಸುತ್ತಿತ್ತು. ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರ ಮೇಲೆ ಪಟಾಕಿ ಎಸೆದು ಪುಂಡಾಟಿಕೆ ಮೆರೆಯುತ್ತಿದ್ದರು.

ಮಹದೇವಸ್ವಾಮಿ ಎಂಬುವರ ಮೇಲೆ ಪಟಾಕಿ ಎಸೆದಿದ್ದು, ಇದನ್ನು ಪ್ರಶ್ನಿಸಿದಾಗ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಮಹದೇವಸ್ವಾಮಿ ಕುತ್ತಿಗೆ ಮೂಳೆ ಮುರಿದಿದೆ. ಹಲ್ಲೆಗೊಳಗಾದ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...