alex Certify ಡಿಕೆಶಿ ಸಿಎಂ ಆಗೋಕೆ ಸಿದ್ದರಾಮಯ್ಯ ಬಿಡೋದಿಲ್ಲ: ಸಿ.ಪಿ ಯೋಗೀಶ್ವರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಕೆಶಿ ಸಿಎಂ ಆಗೋಕೆ ಸಿದ್ದರಾಮಯ್ಯ ಬಿಡೋದಿಲ್ಲ: ಸಿ.ಪಿ ಯೋಗೀಶ್ವರ್​​

ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನದ ಕಿತ್ತಾಟ ಇದೀಗ ಮತ್ತೊಂದು ರೂಪವನ್ನೇ ಪಡೆದಿದ್ದು ದಲಿತ ಸಿಎಂ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಸಿ.ಪಿ. ಯೋಗೀಶ್ವರ್​ ಸಿದ್ದರಾಮಯ್ಯ ಸಿಎಂ ಆದ ಕಾಲದಿಂದಲೇ ಕಾಂಗ್ರೆಸ್​ನಲ್ಲಿ ದಲಿತ ಸಿಎಂ ಕೂಗು ಇತ್ತು ಎಂದು ಹೇಳಿದ್ದಾರೆ.

ನಾಯಕತ್ವ ವಿಚಾರದಲ್ಲಿ ನಮ್ಮ ಪಕ್ಷದ ವಾದ – ವಿವಾದಗಳೆಲ್ಲ ಮುಗಿದಿದೆ. ಜಡ್ಜ್​ಮೆಂಟ್​ಗಾಗಿ ಕಾಯುತ್ತಿದ್ದೇವೆ. ಈಗ ಕಾಂಗ್ರೆಸ್​ನಲ್ಲಿ ನಾಯಕತ್ವದ ಹೋರಾಟ ಶುರುವಾಗಿದೆ. ಕಾಂಗ್ರೆಸ್​​ನಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ಸಿದ್ದರಾಮಯ್ಯ ಸಿಎಂ ಆದ ಸಂದರ್ಭದಲ್ಲಿ ದಲಿತ ಸಿಎಂ ಕೂಗು ಇತ್ತು. ಈಗ ಮತ್ತೆ ಶುರುವಾಗಿದೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಏನಾಗುತ್ತೆ ನೋಡೋಣ ಎಂದು ಹೇಳಿದ್ರು.

ಇನ್ನು ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ಪಾಪ ಶಿವಕುಮಾರ್​ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಆದರೆ ಸಿದ್ದರಾಮಯ್ಯ ಇರೋವರೆಗೂ ಡಿಕೆಶಿಗೆ ಈ ಅವಕಾಶ ಕೊಡೋದಿಲ್ಲ. ಡಿ.ಕೆ. ಶಿವಕುಮಾರ್​ಗೆ ಶಾಸಕರ ಬೆಂಬಲವೂ ಇದ್ದಂತೆ ಕಾಣ್ತಿಲ್ಲ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...