alex Certify 8 ವರ್ಷದ ನಂತರ ಮತ್ತೆ ಒಂದಾದ್ರು ದೂರವಾಗಿದ್ದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ವರ್ಷದ ನಂತರ ಮತ್ತೆ ಒಂದಾದ್ರು ದೂರವಾಗಿದ್ದ ದಂಪತಿ

ಧಾರವಾಡ: ಕರ್ನಾಟಕ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯು ಸುಮಾರು 8 ವರ್ಷಗಳಿಂದ ಕ್ಷುಲಕ ಕಾರಣದಿಂದ ದೂರವಾಗಿ ಬಾಳುತ್ತಿದ್ದ ಮಹೇಂದ್ರ ಮತ್ತು ನಿವೇದಿತಾ ದಂಪತಿಗಳು ಪರಸ್ಪರ ಒಂದಾಗಿ ಬಾಳುವಂತೆ ಎಸ್.ಎಸ್.ಭಾವಖಾನ ಅವರ ಮಧ್ಯಸ್ಥಿಕೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿ, ಒಂದುಗೂಡಿಸಿದೆ.

ದಂಪತಿಗೆ ಒಂದು ಹೆಣ್ಣು ಮಗು ಇದ್ದು, ಅವಳ ಮುಂದಿನ ಭವಿಷ್ಯಕ್ಕಾಗಿ ಕೂಡಿಕೊಂಡು ಸಂತೋಷವಾಗಿ ಇರುವಂತೆ ಪ್ರಕರಣವನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯು ಇತ್ಯರ್ಥಗೊಳಿಸಿದೆ.  ನಿವೇದಿತಾ ಅವರ ಪರವಾಗಿ ಸಮಿತಿಯ ಸದಸ್ಯೆ ನ್ಯಾಯವಾದಿ ಶಶಿಕಲಾ ಕೆ. ಪತ್ರಿ ಅವರು ವಕಾಲತ್ತನ್ನು ವಹಿಸಿದ್ದರು.

ಮಹೇಂದ್ರ ವಿ. ಆಚಾರ ಅವರು ವಕೀಲ ವೆಂಕಟೇಶ ಎಮ್.ಕಾರ್ವಿ ಅವರ ಮೂಲಕ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿದ್ದರು. ಸಮಿತಿಯ ಮೂಲಕ ಉಭಯ ಪರ ವಕೀಲರ ಸತತ ಪ್ರಯತ್ನದ ಫಲವಾಗಿ ಎಸ್.ಎಸ್. ಭಾವಖಾನ ಅವರ ಮಧ್ಯಸ್ಥಿಕೆಯಲ್ಲಿ ರಾಜಿ ಪತ್ರವನ್ನು ಸಿದ್ದಪಡಿಸಿ, ಉಭಯ ಪಕ್ಷಗಾರರಿಗೆ ಓದಿ ಹೇಳಲಾಯಿತು. ಇದಕ್ಕೆ ಒಪ್ಪಿಗೆಯನ್ನು ನೀಡಿದ ಉಭಯ ಪಕ್ಷಗಾರರ ರುಜುಗಳನ್ನು ಪತ್ರದ ಮೇಲೆ ಪಡೆಯಲಾಯಿತು.

ದಂಪತಿಗಳನ್ನು ನ್ಯಾಯಾಧೀಶ ಇ.ಎಸ್.ಇಂದಿರೇಶ ಅವರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರುಳು ದಂಪತಿಗಳೊಂದಿಗೆ ಸಮಾಲೋಚಿಸುತ್ತಾ 8 ವರ್ಷಗಳಿಂದ ಕ್ಷುಲಕ ಕಾರಣದಿಂದ ಒಂದೇ ಊರಿನಲ್ಲಿ ಇದ್ದರೂ ದೂರವಾಗಿ ಬಾಳುತ್ತಿದ್ದ ಅವರಿಗೆ ತಿಳಿವಳಿಕೆಯ ಜೊತೆಗೆ ಮುದ್ದಾದ ಹೆಣ್ಣು ಮಗುವಿನೊಂದಿಗೆ ಅವಳ ಮುಂದಿನ ಭವಿಷ್ಯಕ್ಕಾಗಿ ಕೂಡಿಕೊಂಡು ಸಂತೋಷವಾಗಿ ಇರಲು ತಿಳಿಸಿದರು ಎಂದು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಅಧೀಕ ವಿಲೇಖನಾಧಿಕಾರಿಗಳು(ನ್ಯಾಯಾಂಗ) ಮತ್ತು ಕಾರ್ಯದರ್ಶಿ ವೆಂಕಟೇಶ ಆರ್. ಹುಲಗಿ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...