alex Certify SHOCKING: ದೇಶದಲ್ಲಿ ಹಿಂದೆಂದೂ ಕೇಳಿರದ ಬಹುದೊಡ್ಡ ಆಘಾತ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ದೇಶದಲ್ಲಿ ಹಿಂದೆಂದೂ ಕೇಳಿರದ ಬಹುದೊಡ್ಡ ಆಘಾತ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀ ಭವಿಷ್ಯ

ಹಾಸನ: ದೇಶದಲ್ಲಿ ಹಿಂದೆಂದೂ ಕೇಳಿರದ ಬಹುದೊಡ್ಡ ಆಘಾತ ಸಂಭವಿಸಲಿದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ದೇಶದಲ್ಲಿ ಹಿಂದೆಂದೂ ಕೇಳರಿಯದ ಬಹುದೊಡ್ಡ ಆಘಾತ ಸಂಭವಿಸಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ವರ್ಷ ಹಿಂಗಾರು ಕಡಿಮೆಯಾಗಿದ್ದರೂ ಮುಂಗಾರು ಸೊಗಸಾಗಿರುತ್ತದೆ. ಗಾಳಿ, ಗುಡುಗು, ಸಿಡಿಲುಗಳಿಂದ ಅವಘಡ ಉಂಟಾಗುತ್ತವೆ. ನಿರೀಕ್ಷಿತ ಪ್ರದೇಶಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಮಲೆನಾಡು ಬಯಲುಸೀಮೆಯಂತೆ, ಬಯಲುಸೀಮೆಯಲ್ಲಿ ಪ್ರಕೃತಿ ವಿಕೋಪ ಉಂಟಾಗಿ ಮಲೆನಾಡಿನಂತಾಗುತ್ತದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ವಿದ್ಯುತ್, ಬೆಂಕಿ ಅವಘಡಗಳಿಂದ ಹೆಚ್ಚಿನ ಸಾವು, ನೋವು ಸಂಭವಿಸಲಿದೆ. ಮತೀಯ ಗಲಭೆ, ಆಶಾಂತಿ, ದೊಂಬಿಗಳು ನಡೆದು ಕೊಲೆ, ಸಾವು ನೋವುಂಟಾಗುತ್ತದೆ. ರಾಜಕೀಯ ವೈಫಲ್ಯದಿಂದ ಗುಂಪುಗಾರಿಕೆ ಕೂಡ ಹೆಚ್ಚಾಗುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...