alex Certify BIG NEWS: ದಕ್ಷಿಣ ಕನ್ನಡದಲ್ಲಿ ಕೈಮೀರಿದ ಕೊರೋನಾ..? ಸೋಂಕು, ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಕ್ಷಿಣ ಕನ್ನಡದಲ್ಲಿ ಕೈಮೀರಿದ ಕೊರೋನಾ..? ಸೋಂಕು, ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1632 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 1612 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 25 ಸೋಂಕಿತರು ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,28,033 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,68,351 ಜನ ಗುಣಮುಖರಾಗಿದ್ದು, 36,958 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 1.04 ರಷ್ಟು ಇದೆ. ಇವತ್ತು 1,55,989 ಪರೀಕ್ಷೆ ನಡೆಸಲಾಗಿದೆ. 22,698 ಸಕ್ರಿಯ ಪ್ರಕರಣಗಳು ಇವೆ.

ಬೆಂಗಳೂರಿನಲ್ಲಿ 377 ಜನರಿಗೆ ಸೋಂಕು ತಗುಲಿದೆ. 365 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8200 ಸಕ್ರಿಯ ಪ್ರಕರಣಗಳಿದ್ದು, ಒಬ್ಬ ಸೋಂಕಿತ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 2, ಬಳ್ಳಾರಿ 2, ಬೀದರ್ 0, ಚಿಕ್ಕಬಳ್ಳಾಪುರ 8, ದಾವಣಗೆರೆ 5, ಧಾರವಾಡ 3, ಗದಗ 0, ಹಾವೇರಿ 1, ಕಲಬುರ್ಗಿ 3, ಕೊಪ್ಪಳ 3, ರಾಯಚೂರು 1, ರಾಮನಗರ 3 ವಿಜಯಪುರ 2, ಯಾದಗಿರಿ 0 ಪ್ರಕರಣ ದಾಖಲಾಗಿವೆ.

ಬೆಂಗಳೂರು 377, ದಕ್ಷಿಣಕನ್ನಡ 411, ಹಾಸನ 97, ಕೊಡಗು 77, ಮೈಸೂರು 112, ಶಿವಮೊಗ್ಗ 60, ಉಡುಪಿ 169 ಜನರಿಗೆ ಸೋಂಕು ತಗುಲಿದೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 1, ಚಾಮರಾಜನಗರ 1, ಚಿತ್ರದುರ್ಗ 3, ದಕ್ಷಿಣಕನ್ನಡ 7, ಧಾರವಾಡ 1, ಹಾಸನ 3, ಕೋಲಾರ 3, ಮಂಡ್ಯ 2, ಮೈಸೂರು 1, ಶಿವಮೊಗ್ಗ 1, ಉಡುಪಿ 1 ಉತ್ತರಕನ್ನಡ 1 ಸೇರಿದಂತೆ ರಾಜ್ಯದಲ್ಲಿಂದು 25 ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...