alex Certify BIG BREAKING: ಕೊಪ್ಪಳದಲ್ಲಿ ಕೊರೋನಾ ಶೂನ್ಯ, ಬಹುತೇಕ ಜಿಲ್ಲೆಗಳಲ್ಲೂ ಭಾರಿ ಇಳಿಕೆ –ಇಲ್ಲಿದೆ ಕಂಪ್ಲೀಟ್ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊಪ್ಪಳದಲ್ಲಿ ಕೊರೋನಾ ಶೂನ್ಯ, ಬಹುತೇಕ ಜಿಲ್ಲೆಗಳಲ್ಲೂ ಭಾರಿ ಇಳಿಕೆ –ಇಲ್ಲಿದೆ ಕಂಪ್ಲೀಟ್ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1291 ಜನರಿಗೆ ಸೋಂಕು ತಗುಲಿದ್ದು, 40 ಮಂದಿ ಮೃತಪಟ್ಟಿದ್ದಾರೆ. 3015 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ 27,527 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.94 ರಷ್ಟು ಇದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 28,85,238. ಇದುವರೆಗೆ ಗುಣಮುಖರಾದವರ ಸಂಖ್ಯೆ 28,21,491., ಇದುವರೆಗೆ ಮೃತಪಟ್ಟವರ ಸಂಖ್ಯೆ 36,197.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 266 ಜನರಿಗೆ ಸೋಂಕು ತಗುಲಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

1202 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 10,809 ಸಕ್ರಿಯ ಪ್ರಕರಣಗಳು ಇವೆ.

ಇಂದು ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಯಾವುದೇ ಸಾವು ಸಂಭವಿಸಿಲ್ಲ. ಉಳಿದಂತೆ ಯಾದಗಿರಿ 2, ವಿಜಯಪುರ 7, ರಾಮನಗರ 5, ರಾಯಚೂರು 6. ಕಲಬುರ್ಗಿ 8, ಹಾವೇರಿ 1, ಗದಗ 1, ದಾವಣಗೆರೆ 8, ಚಿಕ್ಕಬಳ್ಳಾಪುರ 9, ಬೀದರ್ 1, ಬಳ್ಳಾರಿ 3, ಬಾಗಲಕೋಟೆ 1 ಪ್ರಕರಣ ಪತ್ತೆಯಾಗಿದೆ.

ಇಂದು ಮೈಸೂರು 125, ಹಾಸನ 125, ದಕ್ಷಿಣಕನ್ನಡ 126, ಚಿಕ್ಕಮಗಳೂರು 100, ಉಡುಪಿ ಜಿಲ್ಲೆಯಲ್ಲಿ 85 ಜನರಿಗೆ ಸೋಂಕು ತಗುಲಿದೆ.

ಇಂದು ಬೆಳಗಾವಿಯಲ್ಲಿ 3, ಹಾಸನ 4, ದಕ್ಷಿಣಕನ್ನಡ 4, ಕೊಡಗು 3, ಮೈಸೂರು 4 ಜನ ಸೇರಿದಂತೆ ರಾಜ್ಯದಲ್ಲಿ 40 ಮಂದಿ ಮೃತಪಟ್ಟಿದ್ದಾರೆ.

ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಗದಗ, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು, ಬೀದರ್ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...