alex Certify ಭಾರತದ ನೆಲವನ್ನು ಚೀನಾ ಆಕ್ರಮಿಸುತ್ತಿದ್ದರೂ ಸರ್ಕಾರದ ಮೌನ….! ಕೇಂದ್ರದ ವಿರುದ್ದ ಕಾಂಗ್ರೆಸ್‌ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ನೆಲವನ್ನು ಚೀನಾ ಆಕ್ರಮಿಸುತ್ತಿದ್ದರೂ ಸರ್ಕಾರದ ಮೌನ….! ಕೇಂದ್ರದ ವಿರುದ್ದ ಕಾಂಗ್ರೆಸ್‌ ಕಿಡಿ

ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದ ಸಂಬಂಧ ಕಾಂಗ್ರೆಸ್​ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಡೋಕ್ಲಾಮ್​ ಬಳಿಯಲ್ಲಿ ಚೀನಾ ಮೂರು ಗ್ರಾಮಗಳನ್ನು ಸ್ಥಾಪಿಸಿದೆ. ಆದರೆ ಮೋದಿ ಸರ್ಕಾರ ಮಾತ್ರ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಲಜ್ಜೆಗೆಟ್ಟ ರೀತಿಯಲ್ಲಿ ರಾಜಿ ಮಾಡಿಕೊಂಡಿದೆ ಎಂದು ಆರೋಪ ಮಾಡಿದೆ. ಅಲ್ಲದೇ ಭಾರತದ ಗಡಿ ವಿಚಾರದಲ್ಲಿ ಪ್ರಧಾನಿ ಮೌನವನ್ನೂ ಕಾಂಗ್ರೆಸ್​ ಟೀಕಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೌರವ್​ ವಲ್ಲಭ್​, ಚೀನಾದ ದಾಳಿ ಹಾಗೂ ಆಕ್ರಮಣವನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯವುಳ್ಳ ನಮ್ಮ ಸಶಸ್ತ್ರ ಪಡೆಯ ಶೌರ್ಯ ಹಾಗೂ ಧೈರ್ಯವನ್ನು ಪ್ರಧಾನಿ ಮತ್ತು ರಕ್ಷಣಾ ಪಡೆ ದುರ್ಬಲಗೊಳಿಸಿದ್ದಾರೆ ಎಂದು ಕಿಡಿಕಾರಿದ್ರು.

ಚೀನಾ ಆಕ್ರಮಣದ ವಿಚಾರದಲ್ಲಿ ಪರದೆಯ ಹಿಂದೆ ಅಡಗಿಕೊಳ್ಳಬೇಡಿ ಜನರಿಗೆ ಈ ವಿಚಾರವಾಗಿ ಪ್ರಧಾನಿಯನ್ನು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ರು.

ಚೀನಾದ ಮಿಲಿಟರಿ ಅಭಿವೃದ್ಧಿಯ ಉಪಗ್ರಹಗಳ ಚಿತ್ರಗಳು ಕಳೆದ ವರ್ಷ ಭೂತಾನ್​ನಲ್ಲಿ ಚೀನಾ ಹಳ್ಳಿಗಳನ್ನು ನಿರ್ಮಾಣ ಮಾಡಿದ್ದನ್ನು ತೋರಿಸುತ್ತಿದೆ. ಸುಮಾರು 100 ಚದರ ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಅನೇಕ ಹೊಸ ಮನೆಗಳು ನಿರ್ಮಾಣ ಮಾಡಿವೆ. ಈ ಗ್ರಾಮಗಳನ್ನು 2020ರ ಮೇ ತಿಂಗಳಿನಿಂದ 2021ರ ನವೆಂಬರ್​ ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ರು.

2017ರಲ್ಲಿ ಚೀನಾ ಹಾಗೂ ಭಾರತ ಮುಖಾಮುಖಿಗೊಂಡ ಪ್ರದೇಶವಾದ ಡೋಕ್ಲಾಮ್​​ನಲ್ಲಿಯೇ ಈ ಹಳ್ಳಿ ನಿರ್ಮಾಣವಾಗಿದೆ. ಭಾರತದ ಭೂ ಪ್ರದೇಶವನ್ನು ಚೀನಾ ಏಕೆ ಆಕ್ರಮಿಸಿಕೊಂಡಿದೆ..? ನಮ್ಮ ಭೂ ಪ್ರದೇಶವನ್ನು ಚೀನಾ ಹೇಗೆ ಆಕ್ರಮಿಸಿದೆ..? ಅರುಣಾಚಲ ಪ್ರದೇಶದಲ್ಲಿ ಚೀನಾದ ಗ್ರಾಮ ಹೇಗೆ ನಿರ್ಮಾಣವಾಗಿದೆ..? ಇದೆಲ್ಲದ್ದಕ್ಕೂ ಕೇಂದ್ರ ಸರ್ಕಾರ ಉತ್ತರ ನೀಡಬೇಕಿದೆ ಎಂದು ಗುಡುಗಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...