alex Certify ಶಿವಸೇನೆ ನಾಯಕನ ನಿವಾಸದ ಮೇಲೆ ಇಡಿ ದಾಳಿ: ವಿಚಲಿತಗೊಂಡ ಮಾಜಿ ಸಂಸದನ ಆರೋಗ್ಯದಲ್ಲಿ ಏರುಪೇರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಸೇನೆ ನಾಯಕನ ನಿವಾಸದ ಮೇಲೆ ಇಡಿ ದಾಳಿ: ವಿಚಲಿತಗೊಂಡ ಮಾಜಿ ಸಂಸದನ ಆರೋಗ್ಯದಲ್ಲಿ ಏರುಪೇರು

ಕೋ ಆಪರೇಟಿವ್​ ಬ್ಯಾಂಕ್​ ಭ್ರಷ್ಟಾಚಾರ ಸಂಬಂಧ ಜಾರಿ ನಿರ್ದೇಶನಾಲಯ ಶಿವಸೇನೆಯ ನಾಯಕ ಹಾಗೂ ಮಾಜಿ ಸಂಸದ ಆನಂದರಾವ್​​ ಅಡ್ಸುಲ್​​ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆನಂದ್​ರಾವ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋ ಆಪರೇಟಿವ್​ ಬ್ಯಾಂಕ್​ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಶಿವಸೇನೆ ಮುಖಂಡ ಆನಂದ್​ ರಾವ್ ಅಡ್ಸುಲ್​ಗೆ ನೋಟಿಸ್​ ನೀಡಿತ್ತು. ಆದರೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಗುರುಗಾಂವ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೋ ಆಪರೇಟಿವ್​ ಬ್ಯಾಂಕಿನಲ್ಲಿ ಭ್ರಷ್ಟಾಚಾರ ಪ್ರಕರಣ ಸಂಬಂಧ ಅಡ್ಸುಲ್​ ಮೇಲೆ ಇಡಿ ಕಣ್ಣಿಟ್ಟಿದೆ. ಅಡ್ಸುಲ್​ ಈ ಹಿಂದೆ ಅಮರಾವತಿ ಕ್ಷೇತ್ರದ ಮೂಲಕ ಸಂಸದರಾಗಿ ಆಯ್ಕೆಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...