alex Certify ‘ಅದೃಷ್ಟ’ದ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅದೃಷ್ಟ’ದ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೇಸ್ ವ್ಯೂ; ನಂಬರ್ 1 ವಸತಿಗೃಹ ಹಂಚಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಿದ್ದ ಈ ವಸತಿಗೃಹವನ್ನು ಹಿಂಪಡೆಯಲಾಗಿದೆ.

ಮುಖ್ಯಮಂತ್ರಿಗಳಿಗಾಗಿ ‘ಕಾವೇರಿ’ ನಿವಾಸ ಮತ್ತು ‘ಅನುಗ್ರಹ’ ನಿವಾಸಗಳಿವೆ. ಅಲ್ಲಿಗೆ ತೆರಳದ ಸಿಎಂ ಬೊಮ್ಮಾಯಿ ರೇಸ್ ವ್ಯೂ; ನಂಬರ್ 1 ವಸತಿಗೃಹಕ್ಕೆ ತೆರಳಲಿದ್ದಾರೆ. ಯಡಿಯೂರಪ್ಪ ಈ ಹಿಂದೆ ಉಪಮುಖ್ಯಮಂತ್ರಿ ಮತ್ತು ಮೊದಲ ಸಲ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೇಸ್ ವ್ಯೂ; ನಂಬರ್ 1 ವಸತಿಗೃಹದಲ್ಲಿ ವಾಸವಾಗಿದ್ದರು. ಇದನ್ನು ಅದೃಷ್ಟದ ಮನೆ ಎಂದು ಬಹುದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಈ ಬಾರಿ ಅವರು ಕಾವೇರಿ ನಿವಾಸದಲ್ಲಿ ತಂಗಿದ್ದಾರೆ.

ಕಾವೇರಿ ನಿವಾಸವನ್ನು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಹಂಚಿಕೆ ಮಾಡಲಾಗಿದ್ದು, ಯಡಿಯೂರಪ್ಪ ಅಲ್ಲೇ ಉಳಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...