alex Certify ಬಟ್ಟೆ ಅಳತೆ ಸರಿ ಹೊಂದುತ್ತಿಲ್ಲ ಬದಲಿಸಿಕೊಡಿ ಎಂದಿದ್ದಕ್ಕೆ ಅಂಗಡಿ ಮಾಲೀಕನಿಂದ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಅಳತೆ ಸರಿ ಹೊಂದುತ್ತಿಲ್ಲ ಬದಲಿಸಿಕೊಡಿ ಎಂದಿದ್ದಕ್ಕೆ ಅಂಗಡಿ ಮಾಲೀಕನಿಂದ ಹಲ್ಲೆ

ಶಿವಮೊಗ್ಗ: ಬಟ್ಟೆ ಬದಲಿಸಿ ಕೊಡಿ ಎಂದು ಹೇಳಿದ್ದಕ್ಕೆ ಗಲಾಟೆ ನಡೆದು ಗ್ರಾಹಕರ ಮೇಲೆ ಅಂಗಡಿಯ ಮಾಲೀಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಶಿವಮೊಗ್ಗದ ದೊಡ್ಡಪೇಟೆ ಠಾಣೆಗೆ ದೂರು ನೀಡಲಾಗಿದೆ. ಈ ಮೂಲಕ ಅಂಗಡಿಯೊಳಗೆ ಬಗೆಹರಿಯಬೇಕಿದ್ದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದಂತಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ಮಹಿಳೆ ಒಬ್ಬರು ಇಬ್ಬರು ಮಕ್ಕಳಿಗೆ ಬಟ್ಟೆ ಖರೀದಿಸಿದ್ದಾರೆ. ಅವುಗಳಲ್ಲಿ ಒಂದರ ಅಳತೆ ಸರಿ ಹೊಂದುತ್ತಿರಲಿಲ್ಲ. ಮಾರನೇ ದಿನ ಅಂಗಡಿಗೆ ಬಂದು ಬಟ್ಟೆ ಬದಲಿಸಿ ಕೊಡುವಂತೆ ಕೇಳಿದ್ದು, ಇದಕ್ಕೆ ಅಂಗಡಿ ಮಾಲೀಕ ಒಪ್ಪಿಲ್ಲ. ಈ ವೇಳೆ ಜಗಳ ನಡೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಠಾಣೆಗೆ ದೂರು ನೀಡಿಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...