alex Certify ‘ವಂದೇ ಮಾತರಂ’ ರೈಲಿನೊಳಗೆ ವಿದ್ಯಾರ್ಥಿಯ ಅದ್ಭುತ ಕೊಳಲು ವಾದನ: ವೈರಲ್‌ ವಿಡಿಯೋಗೆ ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಂದೇ ಮಾತರಂ’ ರೈಲಿನೊಳಗೆ ವಿದ್ಯಾರ್ಥಿಯ ಅದ್ಭುತ ಕೊಳಲು ವಾದನ: ವೈರಲ್‌ ವಿಡಿಯೋಗೆ ಶ್ಲಾಘನೆಗಳ ಮಹಾಪೂರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇದೇ 11ರಂದು ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಬೆನ್ನಲ್ಲೇ ಬೆಂಗಳೂರಿನ ಬಾಲಕನೊಬ್ಬ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದಾನೆ. ಅದಕ್ಕೆ ಕಾರಣ, ಈತ ಕೊಳಲಿನಲ್ಲಿ ವಂದೇ ಮಾತರಂ ಟ್ಯೂನ್​ ನುಡಿಸಿರುವುದು.

ಭಾರತೀಯ ರೈಲ್ವೆ ಖಾತೆಗಳ ಸೇವೆ ಅಧಿಕಾರಿ ಅನಂತ್ ರೂಪನಗುಡಿ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ರೈಲು ಚಲಿಸುತ್ತಿರುವಾಗಲೇ ವಿದ್ಯಾರ್ಥಿ ಕೊಳಲು ನುಡಿಸಿದ್ದಾನೆ. ಅಪ್ರಮೇಯ ಶೇಷಾದ್ರಿ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿ ಭಾರಿ ಶ್ಲಾಘನೆ ಗಳಿಸಿದ್ದಾನೆ.

ವಿಡಿಯೋ ಇದುವರೆಗೆ ಸುಮಾರು 4,900 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈತನ ಈ ಪ್ರತಿಭೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜತೆಗೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಒಳಭಾಗಕ್ಕೂ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...