alex Certify ದುಬಾರಿ ಫೋನ್ ಪಡೆಯಲು ಡ್ಯಾಂ ನೀರು ಖಾಲಿ ಮಾಡಿಸಿದ್ದ ಅಧಿಕಾರಿಯ ಸಂಬಳದಿಂದ್ಲೇ ನೀರಿನ ಹಣ ಪಡೆಯಲು ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಫೋನ್ ಪಡೆಯಲು ಡ್ಯಾಂ ನೀರು ಖಾಲಿ ಮಾಡಿಸಿದ್ದ ಅಧಿಕಾರಿಯ ಸಂಬಳದಿಂದ್ಲೇ ನೀರಿನ ಹಣ ಪಡೆಯಲು ಚಿಂತನೆ

ಡ್ಯಾಂಗೆ ಬಿದ್ದ ತನ್ನ ದುಬಾರಿ ಫೋನ್ ಅನ್ನು ಮರುಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಕಾರಣಕ್ಕಾಗಿ ಛತ್ತೀಸ್‌ಗಢದ ಆಹಾರ ನಿರೀಕ್ಷಕರನ್ನು ಅಮಾನತುಗೊಳಿಸಿದ ನಂತರ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ.

ಮೊಬೈಲ್ ಕಳೆದುಕೊಂಡಿದ್ದ ಅಧಿಕಾರಿಗೆ ಐದು ಅಡಿಗಳಷ್ಟು ನೀರನ್ನು ಖಾಲಿ ಮಾಡಲು ಹಿರಿಯ ಅಧಿಕಾರಿ ಮೌಖಿಕ ಅನುಮತಿ ನೀಡಿದ್ದರು ಎಂದು ತಿಳಿದುಬಂದಿದೆ. ಇಂದ್ರಾವತಿ ಯೋಜನೆಯ ಅಧೀಕ್ಷಕ ಅಭಿಯಂತರರು ಮೇ 26ರಂದು ಉಪವಿಭಾಗಾಧಿಕಾರಿಗೆ ಪತ್ರ ಬರೆದು, ವ್ಯರ್ಥವಾಗಿರುವ ನೀರಿನ ವೆಚ್ಚವನ್ನು ಅಧಿಕಾರಿಯ ಸಂಬಳದಿಂದ ಏಕೆ ವಸೂಲಿ ಮಾಡಬಾರದು. ಬೇಸಿಗೆಯಲ್ಲಿ ನೀರಾವರಿ ಮತ್ತಿತರ ಉದ್ದೇಶಗಳಿಗಾಗಿ ಎಲ್ಲ ಜಲಾಶಯಗಳಲ್ಲಿ ನೀರಿನ ಅಗತ್ಯವಿದೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ಪಾರಕೋಟ್ ಜಲಾಶಯದಲ್ಲಿ ರಜಾದಿನವನ್ನು ಆನಂದಿಸುತ್ತಿದ್ದಾಗ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ 1 ಲಕ್ಷ ರೂ.ಮೌಲ್ಯದ ಸ್ಮಾರ್ಟ್‌ಫೋನ್ ಕೆಳಗೆ ಬಿದ್ದಿತ್ತು. ಸ್ಥಳೀಯರು ಅದನ್ನು ಹುಡುಕಲು ಪ್ರಯತ್ನಿಸಿದರು. ಪ್ರಯತ್ನ ವಿಫಲವಾದಾಗ, ಅಧಿಕಾರಿಯು ಎರಡು ದೊಡ್ಡ 30 ಎಚ್‌ಪಿ ಡೀಸೆಲ್ ಪಂಪ್‌ಗಳನ್ನು ಮೂರು ದಿನಗಳ ಕಾಲ ನಿರಂತರವಾಗಿ ಬಳಸಿ ಫೋನ್ ಅನ್ನು ಹಿಂಪಡೆಯಲು ಮುಂದಾದರು. 1,500 ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಾಕಾಗುವಷ್ಟು 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿದರು. ಮೊಬೈಲ್ ವಾಪಸ್ ಪಡೆದ ಬಳಿಕ ಅದರಲ್ಲಿ ನೀರು ತುಂಬಿದ್ದರಿಂದ ಬಳಕೆಗೆ ಯೋಗ್ಯವಾಗಿಲ್ಲ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...