alex Certify ಅರ್ಧ ಸುಟ್ಟ ವಿಷಪೂರಿತ ಹಾವು ತಿಂದ ಕುಡುಕರು: ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ಸುಟ್ಟ ವಿಷಪೂರಿತ ಹಾವು ತಿಂದ ಕುಡುಕರು: ಆಸ್ಪತ್ರೆಗೆ ದಾಖಲು

ಕೊರ್ಬಾ: ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಇಬ್ಬರು ಕುಡುಕರು ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ವಿಷಪೂರಿತ ಹಾವು ತಿಂದು ಆಸ್ಪತ್ರೆ ಸೇರಿರುವ ವಿಲಕ್ಷಣ ಘಟನೆ ಛತ್ತೀಸ್ ಗಢದ ಕೋರ್ಬಾದ ಇಂದಿರಾ ನಗರದಲ್ಲಿ ನಡೆದಿದೆ.

ಗ್ರಾಮದಲ್ಲಿ ಹಾವು ಕಡಿತ ಪ್ರಕರಣ ಜಾಸ್ತಿಯಾಗುತ್ತಿರುವುದರಿಂದ ಸೇಡು ತೀರಿಸಿಕೊಳ್ಳಲು ಯುವಕರಿಬ್ಬರು ಸುಟ್ಟ ಹಾವು ಸೇವಿಸಿದ್ದಾರೆ. ಹಾವನ್ನು ಹಿಡಿದು ಅದನ್ನು ಸುಟ್ಟ ನಂತರ ಸ್ಥಳೀಯರು ಚರಂಡಿ ಬಳಿ ಎಸೆದಿದ್ದರು. ಈ ವೇಳೆ ಆ ದಾರಿಯಲ್ಲಿ ಬಂದ ರಾಜು ಜಾಂಗ್ಡೆ ಹಾಗೂ ಹಿತೇಂದ್ರ ಆನಂದ್ ಕುಡಿತದ ಅಮಲಿನಲ್ಲಿದ್ದರು. ಬೇರೆಯವರಿಗೆ ಕಚ್ಚುವ ಮುನ್ನ ಹಾವನ್ನು ಸಾಯಿಸಬೇಕೆಂದು, ಜೀವಂತ ಹಾವೆಂದು ತಿಳಿದು ಸರೀಸೃಪವನ್ನು ತಿನ್ನಲು ಆರಂಭಿಸಿದರು.

ಭೌತಿಕ ತರಗತಿ ಆರಂಭದ ಬೆನ್ನಲ್ಲೇ 10 ದಸರಾ ರಜೆ ಘೋಷಣೆ

ಸುಟ್ಟ ಹಾವು ತಿಂದ ಕೂಡಲೇ ಇಬ್ಬರಿಗೂ ತಲೆತಿರುಗುವುದು ಹಾಗೂ ಕಿರಿಕಿರಿ ಅನುಭವವಾಗಿದೆ. ದಾರಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಅವರನ್ನು ನಿಗಾದಲ್ಲಿ ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...