alex Certify ಈ ರಾಶಿಯವರಿಗೆ ಇಂದು ಆರೋಗ್ಯದ ಮೇಲಿರಲಿ ಕಾಳಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಆರೋಗ್ಯದ ಮೇಲಿರಲಿ ಕಾಳಜಿ

ಮೇಷ : ಈ ದಿನದ ಆರಂಭದಲ್ಲಿ ನಿಮ್ಮ ವ್ಯಾಪಾರ ವ್ಯವಹಾರವು ಕೊಂಚ ನಿರಾಶಾದಯಕವಾಗಿ ಇರಲಿದೆ. ಉನ್ನತ ಅಧಿಕಾರಿಗಳು ನಿಮ್ಮನ್ನ ದೂಷಿಸಲು ಅವಕಾಶ ನೀಡಬೇಡಿ. ಕೊಟ್ಟ ಕೆಲಸವನ್ನ ಸರಿಯಾದ ಸಮಯಕ್ಕೆ ಮುಗಿಸುವುದನ್ನ ಕಲಿತುಕೊಳ್ಳಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇದೆ.

ವೃಷಭ : ಶೀತ ಹಾಗೂ ಜ್ವರದ ಸಮಸ್ಯೆ ನಿಮ್ಮನ್ನ ಭಾದಿಸುವುದರಿಂದ ಆದಷ್ಟು ಆರೋಗ್ಯದ ಬಗ್ಗೆ ಜಾಗ್ರತಿ ವಹಿಸಿ. ದೊಡ್ಡ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಲಿದ್ದೀರಿ. ನೆರೆಮನೆಯವರ ಜೊತೆ ಕೊಂಚ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.

ಮಿಥುನ: ಸಂಗಾತಿಯೊಂದಿಗೆ ಹೊಂದಾಣಿಕೆ ಕಂಡು ಬಾರದ ಕಾರಣ ಕಿರಿಕಿರಿ ಎನಿಸಲಿದೆ. ವಾಹನ ಸಂಚಾರದಿಂದ ದೂರ ಇರುವುದು ಉತ್ತಮ. ನಿಮ್ಮೆಲ್ಲ ಕಾರ್ಯಗಳಿಗೆ ಒಡಹುಟ್ಟಿದವರು ಬೆಂಬಲ ನೀಡಲಿದ್ದಾರೆ. ದುಂದು ವೆಚ್ಚ ಮಾಡಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕಟಕ : ನಿಮ್ಮ ಆರೋಗ್ಯ ದುರ್ಬಲವಾಗಿ ಇರೋದ್ರಿಂದ ಸೋಂಕು ಅಥವಾ ಅಲರ್ಜಿಯಿಂದ ಬಳಲುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಸ್ವಚ್ಛತೆಯನ್ನ ಕಾಪಾಡಿಕೊಳ್ಳಿ. ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ಕೊಂಚ ಭಾರ ಎನಿಸಲೂಬಹುದು. ಬಿಳಿ ಬಣ್ಣ ನಿಮಗೆ ಅದೃಷ್ಟ ತರಲಿದೆ. ಗುರು ರಾಘವೇಂದ್ರನನ್ನ ಆರಾಧಿಸಿ.

ಸಿಂಹ : ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡಿ. ವೈಯಕ್ತಿಕ ಜೀವನದಲ್ಲಿ ಕೆಲ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಹೋಟೆಲ್​ ಹಾಗೂ ರೆಸ್ಟಾರೆಂಟ್​ ಉದ್ಯಮಿಗಳಿಗೆ ಇಂದಿನ ದಿನ ಲಾಭದಾಯಕವಾಗಿಲ್ಲ.

ಕನ್ಯಾ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವನ್ನ ಪೂರ್ಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಂಗಾತಿಗೆ ಹೆಚ್ಚು ಸಮಯ ನೀಡುತ್ತಿಲ್ಲ ಎಂಬ ಆರೋಪವನ್ನ ಎದುರಿಸಲಿದ್ದೀರಿ. ಮಕ್ಕಳಿಗೆ ಖುಷಿ ನೀಡುವ ಸಲುವಾಗಿ ದುಬಾರಿ ವಸ್ತು ಖರೀದಿ ಮಾಡುತ್ತೀರಿ.

ತುಲಾ : ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನವಾಗಿದೆ. ಉದ್ಯೋಗದ ಮೇಲೆ ನಿಮ್ಮ ಸಂಪೂರ್ಣ ಗಮನವನ್ನ ನೀಡಲೇಬೇಕು. ಕಠಿಣ ಪರಿಶ್ರಮವಿಲ್ಲದೇ ಯಾವುದೂ ಸಾಧ್ಯವಿಲ್ಲ ಎಂಬುದು ತಲೆಯಲ್ಲಿರಲಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಾದಿದೆ. ಉದ್ಯೋಗಕಕ್ಕೆ ಅರಸುತ್ತಿರುವವರು ಶುಭ ಸುದ್ದಿ ಕೇಳಬಹುದು.

ವೃಶ್ಚಿಕ : ಇಂಜಿನಿಯರಿಂಗ್​ ಪದವಿ ಪೂರೈಸಿದವರಿಗೆ ಒಳ್ಳೆಯ ಉದ್ಯೋಗ ಅವಕಾಶ ಹುಡುಕಿಕೊಂಡು ಬರಲಿದೆ. ಕುಟುಂಬ ಸದಸ್ಯರ ಜೊತೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹಿರಿಯರು ನೀಡುವ ಸಲಹೆಗಳನ್ನ ಗಣನೆಗೆ ತೆಗೆದುಕೊಳ್ಳಿ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿದೆ.

ಧನು : ಸ್ವಂತ ಉದ್ಯಮ ಆರಂಭಿಸಬೇಕು ಎಂಬ ನಿಮ್ಮ ಕನಸು ನನಸಾಗಲು ಹೆಚ್ಚು ದಿನ ಬಾಕಿ ಉಳಿದಿಲ್ಲ. ನೀವು ಮಾಡಿದ ತಪ್ಪಿನಿಂದಾಗಿ ಸಂಗಾತಿಯ ಮನಸ್ಸಿಗೆ ನೋವುಂಟಾಗಲಿದೆ. ಇದರಿಂದ ನಿಮ್ಮ ನೆಮ್ಮದಿ ಹಾಳಾಗಲಿದೆ. ಕಚೇರಿಯಲ್ಲಿ ನಿಮ್ಮ ಸಂಬಳ ಹೆಚ್ಚಾಗಲಿದೆ ಎಂಬ ಶುಭ ಸುದ್ದಿಯನ್ನು ಕೇಳುತ್ತೀರಿ.

ಮಕರ : ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಕೈಗೊಳ್ಳುವ ನಿರ್ಧಾರಗಳ ಬಗ್ಗೆ ಎಚ್ಚರಿಕೆಯಿಂದಿರಿ. ಕೌಟುಂಬಿಕ ಜೀವನ ಅಷ್ಟೇನು ಚೆನ್ನಾಗಿ ಇರೋದಿಲ್ಲ ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿ ಕಲಹ ಉಂಟಾಗಲಿದೆ. ಈ ಹಿಂದೆ ಮಾಡಿದ ಕೈ ಸಾಲಗಳನ್ನ ತೀರಿಸುತ್ತೀರಾ.

ಕುಂಭ : ವ್ಯಾಪಾರಸ್ಥರ ಪಾಲಿಗೆ ಇದು ಶುಭ ದಿನವಾಗಿದೆ. ಇಂದು ನೀವು ನಿರೀಕ್ಷೆಗೂ ಮೀರಿ ಲಾಭ ಗಳಿಸಲಿದ್ದೀರಿ. ಮನೆಯಲ್ಲಿ ಹಿರಿಯರ ಬೆಂಬಲದಿಂದಾಗಿ ನೀವು ಹಿಡಿದ ಕೆಲಸವು ಯಶಸ್ಸು ಪಡೆಯಲಿದೆ. ದೈಹಿಕ ಆರೋಗ್ಯದ ಮೇಲೆ ಕಾಳಜಿ ಇರಲಿ. ದೂರ ಪ್ರಯಾಣ ಬೇಡ.

ಮೀನ : ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ಚೆನ್ನಾಗಿಯೇ ಇರಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇಲ್ಲ. ಹೀಗಾಗಿ ಮಾನಸಿಕವಾಗಿ ದಣಿಯಲಿದ್ದೀರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...