alex Certify ಯಾವ ರಾಶಿಯವರು ಅಂದುಕೊಂಡ ಕೆಲಸ ಇಂದು ಕೈಗೂಡುತ್ತೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ರಾಶಿಯವರು ಅಂದುಕೊಂಡ ಕೆಲಸ ಇಂದು ಕೈಗೂಡುತ್ತೆ ಗೊತ್ತಾ….?

ಮೇಷ : ದೂರದ ಊರಿನಿಂದ ನೆಂಟರು ದಿಢೀರ್​ ನಿಮ್ಮ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಖರ್ಚು ವೆಚ್ಚಗಳನ್ನ ಹತೋಟಿಗೆ ತರುವ ಬಗ್ಗೆ ಯೋಚನೆ ಮಾಡಲೇಬೇಕಿದೆ. ಎಂದಿನಂತೆ ಇಂದು ಕೂಡ ಮೇಲಾಧಿಕಾರಿಯ ಮನಸ್ಸನ್ನು ಗೆಲ್ಲಲಿದ್ದೀರಿ. ಸಂಗಾತಿಯೊಂದಿಗೆ ಕಿರಿಕಿರಿ ಇರಲಿದೆ.

ವೃಷಭ : ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಸಲ್ಲದು. ಇದರಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ಆಹಾರ ಸೇವನೆ ವಿಚಾರದಲ್ಲಿ ಜಾಗ್ರತೆ ವಹಿಸಿ. ದೇವರ ಧ್ಯಾನ ಮಾಡಿ.

ಮಿಥುನ : ಹಿಂದೆ ಬಿಟ್ಟು ಮಾತನಾಡುವ ಬುದ್ಧಿಯನ್ನ ಬಿಟ್ಟುಬಿಡಿ. ಯಾಕೆಂದರೆ ಭವಿಷ್ಯದಲ್ಲಿ ನೀವೇ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ತಡವಾಗಿ ಆದರೂ ಬಡ್ತಿ ಸಿಗಲಿದೆ. ಆರ್ಥಿಕವಾಗಿ ನೀವು ಸದೃಢರಾಗಿ ಇರಲಿದ್ದೀರಿ.

ಕಟಕ : ಪದೇ ಪದೇ ಕಾಲು ಕೆರೆದು ಜಗಳ ಮಾಡುವ ನಿಮ್ಮ ಅಭ್ಯಾಸದಿಂದಾಗಿ ಆತ್ಮೀಯರನ್ನ ಕಳೆದುಕೊಳ್ಳುತ್ತಿದ್ದೀರಾ. ಹೀಗಾಗಿ ಪರಿಸ್ಥಿತಿಯನ್ನ ಆದಷ್ಟು ಶಾಂತ ರೀತಿಯಲ್ಲಿ ನಿಭಾಯಿಸೋದನ್ನ ರೂಢಿ ಮಾಡಿಕೊಳ್ಳಿ. ಸಕಾರಾತ್ಮಕ ಯೋಚನೆಗಳಿಂದ ನಿಮ್ಮ ಕೆಲಸಗಳು ಸುಗಮವಾಗಿ ಸಾಗಲಿದೆ.

ಸಿಂಹ : ನಿಮ್ಮ ಎಲ್ಲಾ ಕೆಲಸಗಳು ನೀವೆಂದುಕೊಂಡಂತೆ ನಡೆಯೋದ್ರಿಂದ ನೆಮ್ಮದಿಯಿಂದ ಇರುತ್ತೀರಿ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನ ತಲುಪಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಿಂದ ಪೋಷಕರು ಸಹ ನಿರಾಳರಾಗಿ ಇರಲಿದ್ದಾರೆ.

ಕನ್ಯಾ : ನಾನೇ ಎಲ್ಲದಕ್ಕೂ ಮಿಗಿಲು ಎಂಬ ಅಹಂಕಾರದಿಂದ ಹೊರಬಂದರೆ ನಿಮಗೆ ಒಳ್ಳೆಯದು. ವ್ಯಾಪಾರ ವ್ಯವಹಾರದಲ್ಲಿ ಕೊಂಚ ನಷ್ಟ ಕಾದಿದೆ. ಕುಟುಂಬಸ್ಥರ ಜೊತೆ ಮಧುರ ಸಮಯವನ್ನ ಕಳೆಯಲಿದ್ದೀರಿ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ತುಲಾ : ಕಚೇರಿ ಕೆಲಸವನ್ನ ಕೊಟ್ಟ ಸಮಯಕ್ಕೆ ಸರಿಯಾಗಿ ಮಾಡಲಾಗದೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಎಂತದ್ದೇ ಸಂದರ್ಭ ಬಂದರೂ ಸರಿ ಪೋಷಕರು ನಿಮ್ಮನ್ನ ಬಿಟ್ಟುಕೊಡದೇ ಇರೋದು ನಿಮಗೆ ಎಂಟಾನೆಯ ಬಲವಿದ್ದಂತೆ. ಸಂಗಾತಿಯಿಂದ ಒಳ್ಳೆಯ ಗುಣಗಳು ನಿಮ್ಮನ್ನ ಕಾಪಾಡಲಿದೆ.

ವೃಶ್ಚಿಕ : ಜವಳಿ ಉದ್ಯಮಿಗಳು, ಎಲೆಕ್ಟ್ರಾನಿಕ್​ ವಸ್ತು ವ್ಯಾಪಾರಿಗಳಿಗೆ ಇದು ಒಳ್ಳೆಯ ದಿನವಾಗಿದೆ. ನಿಮ್ಮ ಮನೆಯಲ್ಲಿ ಕೆಲ ಅಸಮಾಧಾನ ಭುಗಿಲೆದ್ದಿದೆ. ಅದು ಹೆಮ್ಮರವಾಗಿ ಬೆಳೆಯುವ ಮುನ್ನ ಸುಧಾರಿಸಿಕೊಳ್ಳಿ. ಅಂದುಕೊಂಡ ಕಾರ್ಯ ಸುಧಾರಿಸಲು ಶಿವನಾಮ ಸ್ಮರಿಸಿ.

ಧನು : ನಿಮ್ಮ ಹೊಸ ಪ್ರಯತ್ನಕ್ಕೆ ಸ್ನೇಹಿತರ ಬೆಂಬಲ ಇರಲಿದೆ. ಹಣಕಾಸಿನ ಪರಿಸ್ಥಿತಿಯು ಸುಧಾರಿಸಲಿದೆ. ಸಂಗಾತಿಯ ಆರೋಗ್ಯ ಹದಗೆಡೋದ್ರಿಂದ ಕೊಂಚ ಕಷ್ಟ ಎನಿಸಲಿದೆ. ಸಹೋದ್ಯೋಗಿಗಳ ಪಿತೂರಿಯಿಂದ ಕಚೇರಿಯಲ್ಲಿ ಕಿರಿಕಿರಿ ಅನುಭವಿಸುತ್ತೀರಾ.

ಮಕರ: ಉದ್ಯೋಗಾವಕಾಶಕ್ಕಾಗಿ ನೀವು ನಡೆಸುತ್ತಿರುವ ಪ್ರಯತ್ನವನ್ನ ಮುಂದುವರಿಸಿ. ಪ್ರೇಮ ಜೀವನದಲ್ಲಿ ಉಂಟಾದ ವೈಫಲ್ಯ ನಿಮ್ಮ ಮನಸ್ಸನ್ನು ಹಾಳು ಮಾಡಲಾಗಿದೆ. ಅನೇಕರು ನಿಮ್ಮ ಮುಗ್ದತೆಯ ಲಾಭವನ್ನ ಪಡೆಯಲು ಹೋಗುತ್ತಾರೆ. ಆದಷ್ಟು ಎಚ್ಚರದಿಂದ ಇರಿ.

ಕುಂಭ : ಹಿತಶತ್ರುಗಳು ಮಾಡುವ ಆರೋಪದಿಂದ ನೀವು ಕಷ್ಟಕ್ಕೆ ಗುರಿಯಾಗುತ್ತೀರಾ. ವ್ಯಾಪಾರದಲ್ಲಿ ಪದೇ ಪದೇ ಸೋಲನ್ನ ಅನುಭವಿಸುತ್ತಿರುವ ನಿಮಗೆ ಇಂದಿನಿಂದ ಒಳ್ಳೆಯ ದಿನ ಆರಂಭವಾಗಲಿದೆ. ಕುಟುಂಬಸ್ಥರ ಎಲ್ಲಾ ಟೀಕೆಗಳಿಗೆ ಉತ್ತರ ಕೊಡುವ ಕಾಲ ಸನ್ನಿಹಿತವಾಗುತ್ತಿದೆ.

ಮೀನ : ಇಂದು ನಿಮ್ಮ ಕೆಲಸ ಸುಗಮವಾಗಿ ಸಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಕೊಂಚ ಹಿನ್ನಡೆಯಾಗಲಿದೆ. ಹೊಸ ಕಚೇರಿಯ ವಾತಾವರಣವು ನಿಮಗೆ ಹಿಡಿಸಲು ಕೆಲ ಸಮಯ ಬೇಕು ತಾಳ್ಮೆಯಿಂದಿರಿ. ಕುಲದೇವತೆಯನ್ನ ಆರಾಧಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...