alex Certify ರಸ್ತೆಯಲ್ಲಿದ್ದ ಹುಲ್ಲು ಸೈಲೆನ್ಸರ್ ಗೆ ಸಿಲುಕಿ ಕಾರ್ ಗೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿದ್ದ ಹುಲ್ಲು ಸೈಲೆನ್ಸರ್ ಗೆ ಸಿಲುಕಿ ಕಾರ್ ಗೆ ಬೆಂಕಿ

ರಾಮನಗರ: ರಸ್ತೆಯಲ್ಲಿ ಒಣಗಿ ಹಾಕಿದ ರಾಗಿ ಹುಲ್ಲು ಕಾರ್ ನ ಇಂಜಿನ್, ಸೈಲೆನ್ಸರ್ ಗೆ ಸಿಲುಕಿ ಬೆಂಕಿ ಹೊತ್ತಿಕೊಂಡಿದ್ದು, ಇಡೀ ಕಾರ್ ಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.

ಚನ್ನಪಟ್ಟಣ ತಾಲೂಕಿನ ಅಂಕುಶನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಬೆಂಗಳೂರಿನ ವಿಜಯ ಬ್ಯಾಂಕ್ ಲೇಔಟ್ ನಿವಾಸಿ ಅವಿನಾಶ್ ಅವರ ಕಾರ್ ಸುಟ್ಟು ಹೋಗಿದೆ. ಅಂಕುಶನಹಳ್ಳಿ -ಕೃಷ್ಣಾಪುರ ರಸ್ತೆಯಲ್ಲಿ ರಾಗಿ ಹುಲ್ಲು ಒಣಗಿ ಹಾಕಲಾಗಿತ್ತು. ಇದೇ ಮಾರ್ಗವಾಗಿ ತೆರಳುವಾಗ ಇಂಜಿನ್ ಮತ್ತು ಸೈಲೆನ್ಸರ್ ಗೆ ರಾಗಿ ಹುಲ್ಲು ಸಿಲುಕಿ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಇಡೀ ಕಾರಿಗೆ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...