alex Certify ವರನಿಗೆ ಮಾಲೆ ಹಾಕಿ ವಧು ಕೋಣೆಗೆ ತೆರಳಿದ ಮರುಕ್ಷಣವೇ ನಡೆದಿತ್ತು ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನಿಗೆ ಮಾಲೆ ಹಾಕಿ ವಧು ಕೋಣೆಗೆ ತೆರಳಿದ ಮರುಕ್ಷಣವೇ ನಡೆದಿತ್ತು ದುರಂತ

ಹಸೆಮಣೆ ಏರಬೇಕಿದ್ದ ವಧುವನ್ನು ಪಾಗಲ್ ಪ್ರೇಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಮಥುರಾದ ಮುಬಾರಿಕ್ಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮುಬಾರಿಕ್ಪುರದ ನಿವಾಸಿ ಖೂಬಿ ರಾಮ್ ಅವರ ಮಗಳು ಕಾಜಲ್ ಳನ್ನು ನೋಯ್ಡಾದ ಯುವಕನಿಗೆ ಮದುವೆ ಮಾಡಲು ಎಲ್ಲಾ ತಯಾರಿ ನಡೆಸಲಾಗಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪಾಗಲ್ ಪ್ರೇಮಿ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಪೋಷಕರು ಗುರುವಾರ ರಾತ್ರಿ ಜೈ ಮಾಲಾ (ಹೂಮಾಲೆಗಳನ್ನು ಪರಸ್ಪರ ವಧುವರರು ಬದಲಿಸಿಕೊಳ್ಳುವ ಶಾಸ್ತ್ರ) ಕಾರ್ಯಕ್ರಮವನ್ನು ಮುಗಿಸಿಕೊಂಡ ನಂತರ ವಧು ತನ್ನ ಕೊಠಡಿಗೆ ತೆರಳಿದ್ದಾರೆ. ಇದನ್ನೇ ಕಾಯುತ್ತಿದ್ದ ಪಾಗಲ್ ಪ್ರೇಮಿ ನೇರವಾಗಿ ಕೊಠಡಿಗೆ ನುಗ್ಗಿ ವಧುವಿನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಧುವಿನ ತಂದೆ ಖೂಬಿ ರಾಮ್, ವನಮಾಲ ಕಾರ್ಯಕ್ರಮದ ನಂತರ ಕೊಠಡಿಗೆ ತೆರಳಿದ ನನ್ನ ಮಗಳ ಮೇಲೆ ಅಪರಿಚಿತನೊಬ್ಬ ಗುಂಡು ಹಾರಿಸಿ ಕೊಲೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...