alex Certify BREAKING : ಬೈಕ್ ಸವಾರನಿಗೆ ಕಾರು ಗುದ್ದಿ ‘ಕಾಮಿಡಿ ಸ್ಟಾರ್’ ಚಂದ್ರಪ್ರಭಾ ಪರಾರಿ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೈಕ್ ಸವಾರನಿಗೆ ಕಾರು ಗುದ್ದಿ ‘ಕಾಮಿಡಿ ಸ್ಟಾರ್’ ಚಂದ್ರಪ್ರಭಾ ಪರಾರಿ ಆರೋಪ

ಚಿಕ್ಕಮಗಳೂರು : ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡೆದು ಕಾಮಿಡಿ ಸ್ಟಾರ್ ಚಂದ್ರಪ್ರಭಾ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ .

ಚಿಕ್ಕಮಗಳೂರಿನ ಬಳಿ ಈ ಘಟನೆ ನಡೆದಿದ್ದು, ಜಿ ಮಾಲ್ತೇಶ್ ಎಂಬ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕಾಮಿಡಿ ಸ್ಟಾರ್ ಚಂದ್ರಪ್ರಭಾ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಚಂದ್ರಪ್ರಭಾ ಅವರ ಮಾಂಡೈ ಮ್ಯಾಗ್ನಾ ಎಂಬ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.

ಈ ಬಗ್ಗೆ ಚಂದ್ರಪ್ರಭಾ ಸ್ಪಷ್ಟನೆ ನೀಡಿದ್ದು, ಬೈಕ್ ಸವಾರ ಮದ್ಯಪಾನ ಮಾಡಿದ್ದನು, ನಾವೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಚಂದ್ರಪ್ರಭಾ ಹೇಳಿದ್ದಾರೆ. ಆದರೆ ಚಂದ್ರಪ್ರಭಾ ಅಪಘಾತ ನಡೆದರೂ ಮಾನವೀಯತೆ ತೋರಲಿಲ್ಲ, ಬೇರೆ ಯಾರೋ ಮಾಲ್ತೇಶ್ ನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಚಿಕ್ಕಮಗಳೂರು ಸಂಚಾರಿ ಠಾಣೆ ಪೊಲೀಸರು ಚಂದ್ರಪ್ರಭಾನನ್ನು ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕಾಮಿಡಿ ಸ್ಟಾರ್ ಚಂದ್ರಪ್ರಭಾ ಮಜಾ ಭಾರತ, ಗಿಚ್ಚಿಗಿಲಿಗಿಲಿಯಿಂದ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಅವರ ಮೇಲೆ ಈ ಆರೋಪ ಕೇಳಿಬಂದಿದ್ದು, ಪೊಲೀಸ್ ತನಿಖೆಯಿಂದ ಘಟನೆಯ ಸತ್ಯಾನುಸತ್ಯತೆ ಬಗ್ಗೆ ತಿಳಿದು ಬರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...