alex Certify ಕ್ಷಮೆ ಕೋರಿದ ʼಡಾಬಾ ಬಾಬಾʼನ ಭೇಟಿಯಾದ ಯೂಟ್ಯೂಬರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷಮೆ ಕೋರಿದ ʼಡಾಬಾ ಬಾಬಾʼನ ಭೇಟಿಯಾದ ಯೂಟ್ಯೂಬರ್‌

ದೇಶೀ ನೆಟ್ಟಿಗರ ಸಮುದಾಯದಲ್ಲಿ ಬಹಳ ಪ್ರಖ್ಯಾತಿ ಪಡೆದ ಜಗಳವಾದ ಯೂಟ್ಯೂಬರ್‌ ಗೌರವ್‌ ವಾಸನ್ ಹಾಗೂ ಬಾಬಾ ಕಾ ಡಾಬಾದ ಕಾಂತಾ ಪ್ರಸಾದ್‌ ನಡುವಿನ ಜಗಳಕ್ಕೆ ಸುಖಾಂತ್ಯ ಬಿದ್ದಿದೆ.

ಕಾಂತಾ ಪ್ರಸಾದ್ ಬಹಿರಂಗವಾಗಿ ಬಂದು ತಮಗೆ ಕ್ಷಮೆಯಾಚಿಸಿದ ಬಳಿಕ ಅವರ ಡಾಬಾಗೆ ಭೇಟಿ ಕೊಟ್ಟ ಗೌರವ್‌ ವಾಸನ್, ಈ ವೃದ್ಧ ಜೋಡಿಯೊಂದಿಗೆ ಅವರ ಅಂಗಡಿ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಕೋವಿಡ್ ಸಂಕಷ್ಟದ ಕಾರಣದಿಂದಾಗಿ ತಮ್ಮ ಡಾಬಾವನ್ನು ನಡೆಸಲು ಪರದಾಡುತ್ತಿದ್ದ ಕಾಂತಾ ಪ್ರಸಾದ್ ಹಾಗೂ ಬದಾಮಿ ದೇವಿ ದಂಪತಿಯ ನೆರವಿಗೆ ಬಂದಿದ್ದ ಯೂಟ್ಯೂಬರ್‌ ಗೌರವ್‌ ವಾಸನ್ ಹಿರಿಯ ಜೋಡಿಯ ನೋವನ್ನು ವಿಡಿಯೋ ಮಾಡಿಕೊಂಡು, ಅವರ ನೆರವಿಗೆ ದೇಣಿಗೆ ಕಳುಹಿಸಲು ನೆಟ್ಟಿಗರಲ್ಲಿ ಕೋರಿಕೊಂಡಿದ್ದರು.

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್

ಆದರೆ ಮುಂದಿನ ದಿನಗಳಲ್ಲಿ ಈ ಜೋಡಿ ಹಾಗೂ ವಾಸನ್ ನಡುವೆ ಸಂಗ್ರಹಗೊಂಡಿದ್ದ ದುಡ್ಡಿನ ವಿಷಯದಲ್ಲಿ ಮನಸ್ತಾಪ ಉಂಟಾಗಿ, ಇವರ ನಡುವಿನ ರಂಪಾಟ ಆನ್ಲೈನ್‌ನಲ್ಲಿ ಬಹಳ ಸುದ್ದಿಯಾಗಿತ್ತು.

ತಮಗೆ ಬಂದ ದೇಣಿಗೆ ದುಡ್ಡಿನಲ್ಲಿ 5 ಲಕ್ಷ ರೂ.ಗಳ ಬಂಡವಾಳದೊಂದಿಗೆ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದ ಕಾಂತಾ ಪ್ರಸಾದ್, ಎರಡೇ ತಿಂಗಳಲಲ್ಲಿ ಭಾರೀ ಲಾಸ್ ಮಾಡಿಕೊಂಡಿದ್ದರು. ಪರಿಣಾಮವಾಗಿ, ಕಾಂತಾ ಪ್ರಸಾದ್ ದೆಹಲಿಯ ಮಾಳ್ವಿಯಾ ನಗರದಲ್ಲಿರುವ ತಮ್ಮ ಹಳೆಯ ಡಾಬಾಗೆ ಮರಳಬೇಕಾಗಿ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...