alex Certify ಕರ್ನಾಟಕದ ಬಳಿಕ ಈ ರಾಜ್ಯದಲ್ಲೂ ಈಗ ಶುರುವಾಗಿದೆ ಟಿಪ್ಪು ಸುಲ್ತಾನ್​ ವಿವಾದ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ನಾಟಕದ ಬಳಿಕ ಈ ರಾಜ್ಯದಲ್ಲೂ ಈಗ ಶುರುವಾಗಿದೆ ಟಿಪ್ಪು ಸುಲ್ತಾನ್​ ವಿವಾದ..!

ಕರ್ನಾಟಕದಂತೆಯೇ ಇದೀಗ ಆಂಧ್ರ ಪ್ರದೇಶದಲ್ಲೂ ಟಿಪ್ಪು ಸುಲ್ತಾನ್​ ವಿವಾದ ಆರಂಭವಾಗಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದಡ್ಡೂರು ಎಂಬಲ್ಲಿ ಆಂಧ್ರ ಸರ್ಕಾರ ಪ್ರತಿಮೆ ಆರಂಭಕ್ಕೆ ಮುಂದಡಿ ಇಟ್ಟಿದ್ದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರೊದಡ್ಡೂರು ಭಾಗದ ಮುಸ್ಲಿಂ ಸಮುದಾಯದ ಬೇಡಿಕೆಯನ್ನ ಈಡೇರಿಸುವ ಸಲುವಾಗಿ ವೈಎಸ್​ಆರ್​ಪಿ ಶಾಸಕ ರಾಚಮಲ್ಲು ಶಿವ ಪ್ರಸಾದ್​ ರೆಡ್ಡಿ, ಟಿಪ್ಪು ಸುಲ್ತಾನ್​ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ ಇದಕ್ಕೆಸ್ಥಳೀಯ ಹಾಗೂ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದೂ ಪೀಡಕನಾದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿದಲ್ಲಿ ಅದನ್ನ ಧ್ವಂಸ ಮಾಡುತ್ತೇವೆ ಎಂದು ಆಂಧ್ರ ಪ್ರದೇಶ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಜಿನ್ನಾರೋಡ್​ ಸರ್ಕಲ್​ನಲ್ಲಿ ಪ್ರತಿಭಟನೆಗೆ ಮುಂದಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್​ ರೆಡ್ಡಿ ಸೇರಿದಂತೆ ಹಲವರನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ವೋಟ್​ ಬ್ಯಾಂಕ್​ ರಾಜಕಾರಣಕ್ಕೆ ಮುಂದಾಗಿರುವ ವೈಎಸ್​ಆರ್​ಪಿ ಮುಸ್ಲಿಮರ ಮತವನ್ನ ಸೆಳೆಯುವ ಸಲುವಾಗಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುತ್ತಿದೆ ಎಂದು ವಿಷ್ಣುವರ್ಧನ್​ ಆರೋಪಿಸಿದ್ದಾರೆ.

18ನೇ ಶತಮಾನದಲ್ಲಿ ಮೈಸೂರನ್ನ ಆಳಿದ್ದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್​ ಜಯಂತಿ ವಿಚಾರವಾಗಿ ಕರ್ನಾಟಕದಲ್ಲಿ ಶುರುವಾದ ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಈ ನಡುವೆ ಇದೀಗ ಆಂಧ್ರದಲ್ಲೂ ಈ ಹೊಸ ವಿವಾದ ಶುರುವಾದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...