alex Certify ಸಚಿವ K.N ರಾಜಣ್ಣಗೆ ಬಫೂನ್‌ ಎಂದ ಬಿಜೆಪಿ ಸಂಸದ ಮುನಿಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ K.N ರಾಜಣ್ಣಗೆ ಬಫೂನ್‌ ಎಂದ ಬಿಜೆಪಿ ಸಂಸದ ಮುನಿಸ್ವಾಮಿ

ಬೆಂಗಳೂರು : ಬಿ.ವೈ.ವಿಜಯೇಂದ್ರ ಇನ್ನೂ ಚೈಲ್ಡ್ ಎಂಬ ಸಹಕಾರ ಸಚಿವ ರಾಜಣ್ಣ ಹೇಳಿಕೆಗೆ ಬಿಜೆಪಿ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜಣ್ಣ ಬಫೂನ್, ಅವರಿಗೆ ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಏನಾದರು ಹೇಳಿ ಕೊಟ್ಟರೆ ಪರಮೇಶ್ವರ್ ಸಿಎಂ ಮಾಡಿ ಎನ್ನುತ್ತಾರೆ. ಇಲ್ಲವಾದರೆ ಶ್ಯಾಮನೂರು ಶಿವ ಶಂಕರಪ್ಪ ಪರವಾಗಿ ಮಾತನಾಡುತ್ತಾರೆ. ವಿಜಯೇಂದ್ರ ಯsಳಸು ಅನ್ನೋ ರಾಜಣ್ಣಗೆ ಜಾಸ್ತಿ ವಯಸ್ಸಾಗಿದೆ. ಕಾಂಗ್ರೆಸ್ನ ಎಷ್ಟೋ ಜನ ಶಾಸಕರು ಬಿಜೆಪಿ ಜೊತೆಗೆ ಬರಲು ಸಿದ್ದರಿದ್ದಾರೆ. ಕುರುಡುಮಲೆ ವಿನಾಯಕನ ಅನುಗ್ರಹದಿಂದ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಪತನವಾಗಲಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...