alex Certify ಆಸ್ತಿಗೋಸ್ಕರ ತಂದೆಯನ್ನೇ ಕೊಲೆಗೈಯಲು ಮುಂದಾದ ಪುತ್ರ: ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿಗೋಸ್ಕರ ತಂದೆಯನ್ನೇ ಕೊಲೆಗೈಯಲು ಮುಂದಾದ ಪುತ್ರ: ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಆಸ್ತಿಗಾಗಿ ಪೋಷಕರು, ಸಹೋದರ, ಸಹೋದರಿಯರ ಮಧ್ಯೆ ವಾಗ್ವಾದ ಉಂಟಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಅದೆಷ್ಟೋ ಪ್ರಕರಣಗಳು ದಿನನಿತ್ಯ ನಡೆಯುತ್ತಿರುತ್ತದೆ. ಇದೀಗ ಆಸ್ತಿ ವಿವಾದ ಸಂಬಂಧ ವ್ಯಕ್ತಿಯೊಬ್ಬರ ಕಿರಿಯ ಮಗ, ಸೋದರಳಿಯ ಮತ್ತು ಸಹೋದರರು ಸೇರಿ ಅವರನ್ನು ಕೊಲ್ಲಲು ಯತ್ನಿಸಿದ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ.

ಮಾರಣಾಂತಿಕ ದಾಳಿಯಿಂದ ಅದೃಷ್ಟವಶಾತ್ ಅವರು ಬದುಕುಳಿದಿದ್ದಾರೆ. ಘಟನೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಂದೇಶ್ವರ್ ಪ್ರಸಾದ್ ಎಂದು ಗುರುತಿಸಲಾದ ವ್ಯಕ್ತಿ, ಲಖೌರಾ ಪೊಲೀಸ್ ಠಾಣೆ ವ್ಯಾಪ್ತಿಯ ದುಹೋ ಸುಹೋ ಗ್ರಾಮದ ತನ್ನ ಮನೆಯಲ್ಲಿ ತನ್ನ ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಟೆರೇಸ್ ನಲ್ಲಿ ಮಲಗಿದ್ದ ವೇಳೆ ಆತನ ಮಗ ಸಂಜಯ್ ಕುಮಾರ್, ಸೋದರಳಿಯ ಪುರುಷೋತ್ತಮ್ ಕುಮಾರ್ ಮತ್ತು ಆತನ ಕಿರಿಯ ಸಹೋದರ ಹರಿಶಂಕರ್ ಪ್ರಸಾದ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಜುಲೈ 6 ರಂದು ಚಂದೇಶ್ವರ್ ಪ್ರಸಾದ್ ಅವರನ್ನು ಕೊಲೆ ಮಾಡಲು ಮೂವರು ಆಗಮಿಸಿದ್ದರು. ಈ ವೇಳೆ ಸೊಳ್ಳೆ ಪರದೆಗೆ ಸಿಕ್ಕಿಬಿದ್ದ ತಕ್ಷಣ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದರು. ದಾಳಿಯಿಂದ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಚಂದೇಶ್ವರ್ ಪ್ರಸಾದ್ ನೆಟ್‌ನಿಂದ ಬೇಗನೆ ಹೊರಬಂದು ಸಹಾಯಕ್ಕಾಗಿ ಕೂಗಿದ್ದಾರೆ.

ಚಂದೇಶ್ವರ್ ಪ್ರಸಾದ್ ಅವರು ತಮ್ಮ ಕಿರಿಯ ಮಗ ಸಂಜಯ್ ಜೊತೆ ವಾಸಿಸುತ್ತಿದ್ದರು. ಮಗ ಮದ್ಯ ಮತ್ತು ಬೆಟ್ಟಿಂಗ್ ವ್ಯಸನಿಯಾಗಿದ್ದ. ಸಂಜಯ್‌ನಿಂದ ಚಿತ್ರಹಿಂಸೆಗೊಳಗಾದ ನಂತರ, ದುಹೋ ಸಾಹೋದಲ್ಲಿ ಅಂಗಡಿಯನ್ನು ಹೊಂದಿರುವ ತನ್ನ ಹಿರಿಯ ಮಗನೊಂದಿಗೆ ವಾಸಿಸಲು ಪ್ರಾರಂಭಿಸಿದ್ರು. ಚಂದೇಶ್ವರ್ ಪ್ರಸಾದ್ ಅವರಿಗೆ ಜೀವ ಭಯವಿತ್ತು. ಕೆಲ ದಿನಗಳ ಹಿಂದೆ ಕಿರಿಯ ಮಗನ ವಿರುದ್ಧ ದೂರು ದಾಖಲಿಸಿ ಪೊಲೀಸ್ ರಕ್ಷಣೆ ಕೋರಿದ್ದರು.

ಇನ್ನು ಈ ಸಂಬಂಧ ಚಂದೇಶ್ವರ್ ಪ್ರಸಾದ್ ಅವರು ತನ್ನ ಮಗ ಸಂಜಯ್, ಸೋದರಳಿಯ ಪುರುಷೋತ್ತಮ್ ಮತ್ತು ಸಹೋದರ ಹರಿಶಂಕರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...