alex Certify ರಾಮಭಕ್ತರಿಗೆ ಬಿಗ್ ಶಾಕ್ : ಬೆಂಗಳೂರು-ಅಯೋಧ್ಯೆ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮಭಕ್ತರಿಗೆ ಬಿಗ್ ಶಾಕ್ : ಬೆಂಗಳೂರು-ಅಯೋಧ್ಯೆ ವಿಮಾನ ಪ್ರಯಾಣ ದರ ಶೇ.400ರಷ್ಟು ಏರಿಕೆ

ಬೆಂಗಳೂರು : ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಈ ಐತಿಹಾಸಿಕ ಕ್ಷಣವನ್ನು ತುಂಬಿಕೊಳ್ಳಲು ಇಡೀ ದೇಶವೇ ಸಜ್ಜಾಗಿದೆ.

ಇದೀಗ ಅಯೋಧ್ಯೆಗೆ ಹೊರಟ ಕನ್ನಡಿಗರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರು-ಅಯೋಧ್ಯೆ ವಿಮಾನ ದರ 400 % ರಷ್ಟು ಹೆಚ್ಚಳವಾಗಿದೆ.ಜನವರಿ 20 ರಂದು ಅಯೋಧ್ಯೆಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡೋಕೆ ಹೊರಟರೆ ನೀವು ಶಾಕ್ ಆಗ್ತೀರಾ..! . ಏಕೆಂದರೆ, ಅತಿ ಕಡಿಮೆ ಟಿಕೆಟ್ ದರವೇ 24 ಸಾವಿರ ರೂ. ಇದೆ. ವಿಮಾನದಲ್ಲಿ ಅಯೋಧ್ಯೆ ತಲುಪುವುದಕ್ಕೆ 24 ಸಾವಿರ ರೂ. ಹಣ ನೀಡಬೇಕು. ಬೇರೆ ದಿನಕ್ಕೆ ಹೋಲಿಸಿದರೆ ಈಗಿನ ಟಿಕೆಟ್ ದರದಲ್ಲಿ 395% ಏರಿಕೆ ಕಂಡು ಬಂದಿದೆ.

ಜನವರಿ 20 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1ಕ್ಕೆ ಹೊರಡಲಿರುವ ವಿಮಾನ ಅದೇ ದಿನ ರಾತ್ರಿ 11 ಗಂಟೆಗೆ ಅಯೋಧ್ಯೆ ತಲುಪಲಿದೆ. ನಡುವೆ 5 ಗಂಟೆಗಳ ಕಾಲ ಈ ವಿಮಾನ ಅಹಮದಾಬಾದ್ನಲ್ಲಿ ಇರಲಿದೆ. ಈ ವಿಮಾನದ ಟಿಕೆಟ್ ದರ 29,700 ರೂ. ಇದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...