alex Certify BIG NEWS:‌ ಕಡಿಮೆಯಾಗಲಿದೆ ಜನಸಾಮಾನ್ಯರ ಸಾಲದ ಕಂತು; ಬಜೆಟ್‌ನಲ್ಲಿ ವಿತ್ತ ಸಚಿವರೇ ನೀಡಿದ್ದಾರೆ ಈ ಕುರಿತ ಸುಳಿವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಕಡಿಮೆಯಾಗಲಿದೆ ಜನಸಾಮಾನ್ಯರ ಸಾಲದ ಕಂತು; ಬಜೆಟ್‌ನಲ್ಲಿ ವಿತ್ತ ಸಚಿವರೇ ನೀಡಿದ್ದಾರೆ ಈ ಕುರಿತ ಸುಳಿವು…!

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಬಡ್ಡಿದರಗಳ ಇಳಿಕೆಯ ಬಗ್ಗೆ ಸುಳಿವು ನೀಡಿದ್ದಾರೆ. ವಿತ್ತೀಯ ಕೊರತೆ, ಸರ್ಕಾರದ ಸಾಲ ಮತ್ತು ಬಂಡವಾಳ ವೆಚ್ಚಗಳ ಅಂಕಿ-ಅಂಶಗಳನ್ನು ಅವರು ಮಂಡಿಸಿದ್ದಾರೆ. ಅವರು ಪ್ರಸ್ತುತಪಡಿಸಿದ ಸಂಖ್ಯೆಗಳ ಆಧಾರದಲ್ಲಿ, ರೂಪಾಯಿ ಮತ್ತು ಮೂಲ ಸೌಕರ್ಯಗಳ ಬೆಂಬಲದಿಂದಾಗಿ ಮುಂಬರುವ ಸಮಯದಲ್ಲಿ ಬಡ್ಡಿದರಗಳು ಕಡಿಮೆಯಾಗಬಹುದು.

2024-25ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ. 5.1ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಅದನ್ನು ಶೇ.5.9ರಿಂದ ಶೇ.5.8ಕ್ಕೆ ಇಳಿಸಲಾಗಿದೆ. ವಿತ್ತೀಯ ಕೊರತೆಯನ್ನು ತಗ್ಗಿಸಲು ನಿಗದಿಪಡಿಸಿದ ಗುರಿಗಳಲ್ಲಿ ಭಾರತವು ಮೊದಲಿಗಿಂತಲೂ ಉತ್ತಮ ಸಾಧನೆ ಮಾಡಿದೆ ಎಂಬುದನ್ನು ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಒಪ್ಪಿಕೊಳ್ಳುವ ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

ದೇಶದ ವಿತ್ತೀಯ ಕೊರತೆ 17 ಲಕ್ಷದ 34 ಸಾವಿರದ 773 ಕೋಟಿ ರೂಪಾಯಿಯಷ್ಟಿದೆ. 2024-25ನೇ ಹಣಕಾಸು ವರ್ಷದಲ್ಲಿ 16 ಲಕ್ಷ 85 ಸಾವಿರದ 494 ಕೋಟಿ ರೂಪಾಯಿಗೆ ಇದನ್ನು ಇಳಿಸುವ ಗುರಿ ಹೊಂದಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2023-24ಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರದ ಸಾಲ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಭವಿಷ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ.

ತೆರಿಗೆ ಸಂಗ್ರಹ, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸರ್ಕಾರಕ್ಕೆ ಲಾಭವನ್ನು ಹೆಚ್ಚಿಸುವುದರಿಂದ ವಿತ್ತೀಯ ಕೊರತೆಯನ್ನು ಕಡಿಮೆ ಮಾಡಬಹುದು. ಭಾರತದ ಹಣಕಾಸು ಖಾತೆಯ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ವಿತ್ತೀಯ ಕೊರತೆಯ ಕಡಿತವು ಸಕಾರಾತ್ಮಕ ಸಂಕೇತ. ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವುದು ಹಣದುಬ್ಬರವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಇದರಿಂದ ರಿಸರ್ವ್ ಬ್ಯಾಂಕ್ ಕೆಲಸವೂ ಸುಲಭವಾಗಲಿದೆ.

ಹಣದುಬ್ಬರ ದರವನ್ನು ಶೇ.2 ರಿಂದ 6ರ ನಡುವೆ ಇರಿಸುವ ಜವಾಬ್ದಾರಿಯನ್ನು ಸರ್ಕಾರವು RBIಗೆ ನೀಡಿದೆ. ಹಣದುಬ್ಬರ ಕಡಿಮೆಯಾದರೆ, ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಆರ್‌ಬಿಐ ರೆಪೊ ದರವನ್ನು ಶೇಕಡಾ 6.5ಕ್ಕೆ ಕಾಯ್ದುಕೊಂಡಿದೆ. ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ. 5.69 ರಷ್ಟಿತ್ತು.

ವಿತ್ತೀಯ ಕೊರತೆ ಎಂದರೇನು ?

ವಿತ್ತೀಯ ಕೊರತೆಯು ಸರ್ಕಾರದ ಒಟ್ಟು ಖರ್ಚು ಮತ್ತು ಅದರ ಒಟ್ಟು ಆದಾಯದ ನಡುವಿನ ವ್ಯತ್ಯಾಸ. ಸರಳ ಪದಗಳಲ್ಲಿ ಹೇಳುವುದಾದರೆ  ಸರ್ಕಾರವು ತನ್ನ ಅಗತ್ಯ ವೆಚ್ಚಗಳನ್ನು ಪೂರೈಸಲು ಸಾಕಷ್ಟು ಆದಾಯವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ವೆಚ್ಚ ಭರಿಸಲು ಸಾಲ ಮಾಡಬೇಕಾಗುತ್ತದೆ. ಈ ಸಾಲವನ್ನು ವಿತ್ತೀಯ ಕೊರತೆ ಎಂದು ಕರೆಯಲಾಗುತ್ತದೆ.

ಹೆಚ್ಚುತ್ತಿರುವ ವಿತ್ತೀಯ ಕೊರತೆಯ ಪರಿಣಾಮ

ವಿತ್ತೀಯ ಕೊರತೆಯ ಹೆಚ್ಚಳವು ಸರ್ಕಾರದ ಮೇಲೆ ಮಾತ್ರವಲ್ಲದೆ ಸಾಮಾನ್ಯ ಜನರ ಮೇಲೂ ಪರಿಣಾಮ ಬೀರುತ್ತದೆ. ವಿತ್ತೀಯ ಕೊರತೆಯ ಹೆಚ್ಚಳದಿಂದ ಹಣದುಬ್ಬರ ದರ ಹೆಚ್ಚಾಗುತ್ತದೆ. ಹಣದುಬ್ಬರವನ್ನು ನಿಯಂತ್ರಿಸಲು, ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. ವಿತ್ತೀಯ ಕೊರತೆ ಹೆಚ್ಚಾದಂತೆ ಸರ್ಕಾರದ ಮೇಲಿನ ಸಾಲದ ಹೊರೆ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು, ಸರ್ಕಾರವು ವೆಚ್ಚವನ್ನು ಕಡಿತಗೊಳಿಸಬಹುದು. ಆರ್ಥಿಕ ಕ್ಷೇತ್ರದಲ್ಲಿನ ಅಭಿವೃದ್ಧಿಯಿಂದಾಗಿ ಸರ್ಕಾರವು ಆದಾಯವನ್ನು ಪಡೆಯುತ್ತದೆ ಮತ್ತು ವಿತ್ತೀಯ ಕೊರತೆಯು ಕಡಿಮೆಯಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...