alex Certify BIG NEWS: BSY ಗನ್ ಮ್ಯಾನ್ ಗಳಲ್ಲಿ ಒಬ್ಬ ED ಅಧಿಕಾರಿ; ಹೊಸ ಬಾಂಬ್ ಸಿಡಿಸಿದ ಕೆಪಿಸಿಸಿ ವಕ್ತಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BSY ಗನ್ ಮ್ಯಾನ್ ಗಳಲ್ಲಿ ಒಬ್ಬ ED ಅಧಿಕಾರಿ; ಹೊಸ ಬಾಂಬ್ ಸಿಡಿಸಿದ ಕೆಪಿಸಿಸಿ ವಕ್ತಾರ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗನ್ ಮ್ಯಾನ್ ಗಳಲ್ಲಿ ಒಬ್ಬ ಇಡಿ ಅಧಿಕಾರಿ ಇರ್ತಾರೆ ಎಂದು ಹೇಳುವ ಮೂಲಕ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಲಕ್ಷ್ಮಣ್, ಯಡಿಯೂರಪ್ಪ ಜೊತೆಯಲ್ಲಿಯೇ ಇಡಿ ಅಧಿಕಾರಿ ಇರ್ತಾರೆ, ಗನ್ ಮ್ಯಾನ್ ಸಮವಸ್ತ್ರದಲ್ಲಿರುವವರು ಒಬ್ಬ ಇಡಿ ಅಧಿಕಾರಿಯಾಗಿರ್ತಾರೆ. ಯಡಿಯೂರಪ್ಪ ಎಲ್ಲಿಯೇ ಹೋದರೂ ಇಡಿ ಅಧಿಕಾರಿ ಜೊತೆಯಲ್ಲಿ ಇರ್ತಾರೆ. ಇಡಿ ಅಧಿಕಾರಿಯೇ ಬಿ ಎಸ್ ವೈ ಬಾಯಿಂದ ಹೇಳಿಕೆಗಳನ್ನು ಕೊಡಿಸ್ತಾರೆ ಎಂದು ಆರೋಪಿಸಿದ್ದಾರೆ.

ಯಡಿಯೂರಪ್ಪನವರ ಪ್ರತಿ ಭಾಷಣದಲ್ಲಿಯೂ ಅವರೇ ಇರುತ್ತಾರೆ. ಅದಕ್ಕೆ ಪಕ್ಷದ ವಿರುದ್ಧ ಯಡಿಯೂರಪ್ಪ ಮಾತನಾಡಲ್ಲ. ಗನ್ ಮ್ಯಾನ್ ರೂಪದಲ್ಲಿ ಇಡಿ ಅಧಿಕಾರಿ ಇರುವುದರಿಂದ ಯಡಿಯೂರಪ್ಪ ಮಾತನಾಡಲು ಹೋಗಲ್ಲ. ಆ ಇಡಿ ಅಧಿಕಾರಿ ಯಾರೆಂದು ನಾನು ತೋರಿಸುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...