alex Certify BIG NEWS: BJP ಮುಖಂಡ ಹಾಗೂ KSSIDC ನಿರ್ದೇಶಕರ ಕಾರುಗಳ ಮಧ್ಯೆ ಅಪಘಾತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BJP ಮುಖಂಡ ಹಾಗೂ KSSIDC ನಿರ್ದೇಶಕರ ಕಾರುಗಳ ಮಧ್ಯೆ ಅಪಘಾತ

ಮೈಸೂರು: ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಲು ತೆರಳಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಾರಿನ ಹಿಂದೆ ಸಾಗುತ್ತಿದ್ದ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಬಿಜೆಪಿ ಮುಖಂಡರು ನಡು ರಸ್ತೆಯಲ್ಲಿಯೇ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಬೆಂಗಾವಲು ವಾಹನಗಳ ಹಿಂದೆ ಬರುತ್ತಿದ್ದ ಬಿಜೆಪಿ ಮುಖಂಡ ಸಂದೇಶ್ ಹಾಗೂ ಕೆ ಎಸ್ ಎಸ್ ಐ ಡಿ ಸಿ ನಿರ್ದೇಶಕ ಮಹದೇವಸ್ವಾಮಿ ಅವರ ಎರಡೂ ಕಾರುಗಳು ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಅಪಘಾತಕ್ಕೀಡಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಬಿಜೆಪಿ ಮುಖಂಡ ಸಂದೇಶ್ ಹಾಗೂ ಮಹದೇವಸ್ವಾಮಿ ಮಧ್ಯೆ ರಸ್ತೆಯಲ್ಲಿಯೇ ವಾಗ್ವಾದ ಗಲಾಟೆ ನಡೆದಿದೆ.

ರಸ್ತೆ ಮಧ್ಯೆಯೇ ಇಬ್ಬರು ನಾಯಕರ ನಡುವಿನ ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ನಾಯಕರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...