alex Certify BIG NEWS: BJP ಗೆ ಸೇರಿದ ಬಾಂಬೆ ಬಾಯ್ಸ್ ವಾಪಸ್ ಬರ್ತಾರೆ; ಸತೀಶ್ ಜಾರಕಿಹೊಳಿ ಹೊಸ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: BJP ಗೆ ಸೇರಿದ ಬಾಂಬೆ ಬಾಯ್ಸ್ ವಾಪಸ್ ಬರ್ತಾರೆ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

ದಾವಣಗೆರೆ: ಬಿಜೆಪಿ ಸೇರಿರುವ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ ವಾಪಸ್ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ವಾಪಸ್ ಪಕ್ಷಕ್ಕೆ ಬರುತ್ತಾರೆ. ರಾಜಕೀಯ ಅಂದಮೇಲೆ ಇದೆಲ್ಲ ಮಾಮೂಲು. ಅಲ್ಲಿದ್ದವರು ಇಲ್ಲಿಗೆ ಇಲ್ಲಿದ್ದವರು ಅಲ್ಲಿಗೆ…… ಚುನಾವಣೆಗೆ ಇನ್ನೂ ಒಂದು ವರ್ಷ ಟೈಂ ಇದೆ. ಬಿಜೆಪಿಗೆ ಹೋದವರು ವಾಪಸ್ ಬಂದೇ ಬರ್ತಾರೆ ಎಂದು ಹೇಳಿದರು.

ಈಗಾಗಲೇ ಈ ಬಗ್ಗೆ ಮಾತುಕತೆಗಳು ನಡೆದಿವೆ. ಪಕ್ಷದ ವರಿಷ್ಠರು ಅಂತಿಮವಾಗಿ ಮಾತನಾಡುತ್ತಾರೆ. ಮುಂದಿನ ಫೆಬ್ರವರಿ ವೇಳೆಗೆ ಚುನಾವಣೆ. ಒಂದು ವರ್ಷ ಸಮಯಾವಕಾಶವಿದೆ. ಪಕ್ಷ ಬಿಟ್ಟು ಹೋದವರು ಕೆಲವರು ವಾಪಸ್ ಆಗುವುದು ಖಚಿತ ಎಂದರು.

ಇದೇ ವೇಳೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಯಾವತ್ತಿದ್ದರೂ ಮಾಸ್ ಲೀಡರ್, ನಂಬರ್ ಒನ್ ಸ್ಥಾನದಲ್ಲಿ ಇರುತ್ತಾರೆ. ರಾಜ್ಯದಲ್ಲಿ ಅವರಿಗೆ ಅವರದ್ದೇ ಬೆಂಬಲಿಗರ ಪಡೆ ಇದೆ, ಮಾಸ್ ಅಟ್ರಾಕ್ಷನ್ ಆಗಿ ಗುರುತಿಸಿಕೊಳ್ತಾರೆ. ಅವರು ಕಾಂಗ್ರೆಸ್ ನ ಟಾಪ್ ಮೋಸ್ಟ್ ನಾಯಕ ಎಂದು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...