alex Certify BIG NEWS: ACB ದಾಳಿ ಕಣ್ಣೊರೆಸುವ ತಂತ್ರ; ವ್ಯಂಗ್ಯವಾಡಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ACB ದಾಳಿ ಕಣ್ಣೊರೆಸುವ ತಂತ್ರ; ವ್ಯಂಗ್ಯವಾಡಿದ HDK

ಬೆಂಗಳೂರು: ಬಿಡಿಎ ಮಧ್ಯವರ್ತಿಗಳು, ಏಜೆಂಟರ ಮನೆ ಮೇಲೆ ಇಂದು ನಡೆದ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದು, ಇದೊಂದು ಐ ವಾಷ್ ಅಷ್ಟೇ ಎಂದು ಹೇಳಿದ್ದಾರೆ.

ಎಸಿಬಿ ದಾಳಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈವರೆಗೆ ಹಲವೆಡೆ, ಹಲವು ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿಗಳಾದವು. ಆದರೆ ಇಲ್ಲಿಯವರೆಗೆ ಎಷ್ಟು ಜನರಿಗೆ ಶಿಕ್ಷೆ ಆಗಿದೆ. ಯಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ? ಈ ಬಗ್ಗೆ ಮಾಹಿತಿಯನ್ನು ಸರ್ಕಾರ ಮುಂದಿಡಬೇಕು ಎಂದರು.

ಕೇವಲ ಪ್ರಚಾರಕ್ಕಾಗಿ ರೇಡ್ ಮಾಡುವುದರಿಂದ ಪ್ರಯೋಜನವಿಲ್ಲ. ಯಾವೊಬ್ಬ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ? ಸೀಜ್ ಮಾಡಿದ ಹಣವನ್ನು ಏನು ಮಾಡಿದರು ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ. ಅದನ್ನು ಬಿಟ್ಟು ದಾಳಿ ನಡೆಸುವುದು ಬಳಿಕ ಸುಮ್ಮನೆ ಬಿಟ್ಟು ಕಳಿಸುವ ಕೆಲಸ ಮಾಡುವುದು ಯಾತಕ್ಕೆ ? ಎಸಿಬಿ ದಾಳಿಗಳು ಕಣ್ಣೊರೆಸುವ ತಂತ್ರ ಅಷ್ಟೇ ಎಂದು ವ್ಯಂಗ್ಯವಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...