alex Certify BIG NEWS: 2,500 ಕೋಟಿ ಹೇಳಿಕೆ ವಿಚಾರ; ಸಿಎಂ ಆಗಬೇಕೆಂದು ಆಸೆಪಟ್ಟವರು ನೀಡಿದ ಹೇಳಿಕೆ ನಿಜವೆನಿಸುತ್ತೆ; ಬಿ.ಎಸ್.ವೈ, ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಾಗಲಿ ಎಂದ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2,500 ಕೋಟಿ ಹೇಳಿಕೆ ವಿಚಾರ; ಸಿಎಂ ಆಗಬೇಕೆಂದು ಆಸೆಪಟ್ಟವರು ನೀಡಿದ ಹೇಳಿಕೆ ನಿಜವೆನಿಸುತ್ತೆ; ಬಿ.ಎಸ್.ವೈ, ಬೊಮ್ಮಾಯಿ ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಾಗಲಿ ಎಂದ ಸಿದ್ದರಾಮಯ್ಯ

ಬೆಳಗಾವಿ: ಸಿಎಂ ಹುದ್ದೆಗೆ 2,500 ಕೋಟಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದವರು ಹೇಳಿದ್ದಾರೆ. ಹಾಗಾಗಿ ನಿಜವಿರಬೇಕು ಎಂದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸ್ವಪಕ್ಷದ ಶಾಸಕರೇ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರು ಎಷ್ಟು ಹಣ ಕೊಟ್ಟು ಸಿಎಂ ಆದರು, ಸಚಿವರು ಎಷ್ಟು ಕೊಟ್ಟು ಮಂತ್ರಿಯಾದರು ಎಂಬುದೂ ಗೊತ್ತಾಗಲಿ ಎಂದು ಸವಾಲು ಹಾಕಿದರು.

ಈ ಕಣ್ಕಟ್ಟು ಚಿತ್ರದಲ್ಲಿ ಅಡಗಿರುವ ಪದಗಳನ್ನು ಹುಡುಕುವುದೊಂದು ದೊಡ್ಡ ಸವಾಲು…! ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ಸಿಎಂ ಬೊಮ್ಮಾಯಿ ಸರ್ಕಾರ ಹಗರಣಗಳ ಸರ್ಕಾರವಾಗಿದೆ. ಇಷ್ಟೊಂದು ದೊಡ್ಡ ದೊಡ್ಡ ಮಟ್ಟದ ಭ್ರಷ್ಟಾಚಾರ ಯಾರ ಕಾಲದಲ್ಲಿಯೂ ನಡೆದಿರಲಿಲ್ಲ. ಎಲ್ಲಾ ಇಲಾಖೆ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ. ನನ್ನ ರಾಜಕೀಯ ಜೀವನದಲ್ಲಿಯೇ ಇಂಥಹ ಹಗರಣಗಳನ್ನು ನೋಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...