alex Certify BIG NEWS: ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದರೂ, ಸಾಯಿಸಿದರೂ ಸುಮ್ಮನಿರಬೇಕಾ…?; ವಿವಾದಾತ್ಮಕ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದರೂ, ಸಾಯಿಸಿದರೂ ಸುಮ್ಮನಿರಬೇಕಾ…?; ವಿವಾದಾತ್ಮಕ ಹೇಳಿಕೆ ಮತ್ತೆ ಸಮರ್ಥಿಸಿಕೊಂಡ ಈಶ್ವರಪ್ಪ

ಶಿವಮೊಗ್ಗ: ನಾನು ನಿನ್ನೆ ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಒಂದು ಕಾಲದಲ್ಲಿ ನಮಗೆ ಶಕ್ತಿ ಇರಲಿಲ್ಲ, ಆದರೆ ಈಗ ಹಾಗಿಲ್ಲ, ನಮಗೆ ತೊಂದರೆಗಳಾಗುತ್ತಿದ್ದರೂ ಸಹಿಸಿಕೊಳ್ಳುವ ಕಾಲ ಇದಲ್ಲ ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಸಮರ್ಥಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡ್ತಾರೆ ಸುಮ್ಮನಿರಬೇಕಾ? ನಮ್ಮ ಯುವಕರಿಗೆ ಹೊಡೆಯುತ್ತಾರೆ ಸುಮ್ಮನಿರಬೇಕಾ? ಸಾಯಿಸುತ್ತಾರೆ ಸುಮ್ಮನಿರಬೇಕಾ? ಗೋವನ್ನು ಕಳ್ಳತನ ಮಾಡಿ ಹತ್ಯೆ ಮಾಡ್ತಾರೆ ಸುಮ್ಮನಿರಬೇಕಾ? ಈಗಲೂ ಸುಮ್ಮನಿರಿ ಎನ್ನುವ ಕಾಲ ಹೋಯಿತು ಎಂಬುದನ್ನು ನಾನು ಹೇಳಿದ್ದೇನೆ ಎಂದರು.

ಹೊಡೆದ್ರೆ ಹೊಡೆಸಿಕೊಳ್ಳಿ, ಸಾಯಿಸಿದ್ರೆ ಸುಮ್ಮನಿರಿ ಎನ್ನುವ ಕಾಲ ಹೋಯ್ತು, ಈಗ ಕಾಲ ಬದಲಾಗಿದೆ. ಪರಿಸ್ಥಿತಿ ಬದಲಾಗಿದೆ. ಪಕ್ಷ, ಸಂಘಟನೆ ಕೂಡ ಸಾಕಷ್ಟು ಬೆಳೆದಿದೆ. ಹಾಗಾಗಿ ನಮ್ಮ ತಂಟೆಗೆ ಬಂದರೆ ಸುಮ್ಮನೆ ಕೂರಬೇಕಿಲ್ಲ ಎಂಬುದನ್ನು ನಾನು ಈಗಲೂ ಹೇಳುತ್ತಿದ್ದೇನೆ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...