alex Certify BIG NEWS: ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಾಗಿ ಬೆಟ್ಟಿಂಗ್; ಜಮೀನು ಪಣಕ್ಕಿಟ್ಟ ‘ಕೈ’ ಕಾರ್ಯಕರ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಾಗಿ ಬೆಟ್ಟಿಂಗ್; ಜಮೀನು ಪಣಕ್ಕಿಟ್ಟ ‘ಕೈ’ ಕಾರ್ಯಕರ್ತ

ಹಾನಗಲ್: ಉಪಚುನಾವಣಾ ಅಖಾಡದ ಮತ ಎಣಿಕೆ ವೇಳೆಯಲ್ಲೂ ಬೆಟ್ಟಿಂಗ್ ಬರಾಟೆ ಜೋರಾಗಿದ್ದು, ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವಿನ ಪರ ಕಾರ್ಯಕರ್ತನೊಬ್ಬ ಜಮೀನನ್ನೇ ಪಣಕ್ಕಿಟ್ಟ ಘಟನೆ ಬೆಳಕಿಗೆ ಬಂದಿದೆ.

ಸಿಂದಗಿ ಉಪಚುನಾವಣಾ ಅಖಾಡದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಮುನ್ನಡೆ ಕಾಯ್ದುಕೊಂಡಿದ್ದರೆ, ಹಾನಗಲ್ ನಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಕೈ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

ಫಟಾಫಟ್​ ತಯಾರಿಸಿ ಬಾಳೆ ಹಣ್ಣಿನ ಮಿಲ್ಕ್​ ಶೇಕ್​….!

ಈ ನಡುವೆ ಮಾರನಬೀಡ ಗ್ರಾಮದ ಹನುಮಂತಪ್ಪ ಎಂಬ ಕಾಂಗ್ರೆಸ್ ಕಾರ್ಯಕರ್ತ ಶ್ರೀನಿವಾಸ್ ಮಾನೆ ಗೆಲುವು ಸಾಧಿಸಲಿದ್ದಾರೆ ಎಂದು ಬೆಟ್ಟಿಂಗ್ ಕಟ್ಟಿದ್ದು, ತಮ್ಮ ಒಂದು ಎಕರೆ ಜಮೀನು ಪಣಕ್ಕಿಟ್ಟಿದ್ದಾರೆ. ಅಲ್ಲದೇ 15 ಸಾವಿರ ರೂಪಾಯಿ ಹಣವನ್ನೂ ಬೆಟ್ಟಿಂಗ್ ಗೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...