ಕಾರವಾರ: ಮಾಜಾಳಿ ಪಂಚಾಯಿತಿ ಪಿಡಿಓ ಬದಲಾವಣೆ ವಿರೋಧಿಸಿ ಮನವಿಗೆ ಬಂದಾಗ ಕಾಗ್ರೆಸ್ ಶಾಸಕಿ ರೂಪಾಲಿ ನಾಯಕ್, ದರ್ಪ ತೋರಿ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಕಾಂಗ್ರೆಸ್ ನ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಗಲಾಟೆ ನಡೆದಿದ್ದು, ರೂಪಾಲಿ ನಾಯಕ್ ಹಾಗೂ ಸತೀಶ್ ಸೈಲ್ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ರೂಪಾಲಿ ನಾಯಕ್ ಮಾಜಿ ಶಾಸಕರನ್ನು ಕುಡುಕ ಎಂದು ಬೈದು ಮೇಜಿನ ಮೇಲಿದ್ದ ಪೇಪರ್ ವೇಟ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸತೀಶ್ ಸೈಲ್ ಆರೋಪಿಸಿದ್ದಾರೆ.