alex Certify BIG NEWS: ಸೋನಿಯಾ ಗಾಂಧಿ ಮಡಿಕೇರಿ ಪ್ರವಾಸ ರದ್ದು; ವಾಸ್ತವ್ಯ ದಿಢೀರ್ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೋನಿಯಾ ಗಾಂಧಿ ಮಡಿಕೇರಿ ಪ್ರವಾಸ ರದ್ದು; ವಾಸ್ತವ್ಯ ದಿಢೀರ್ ಬದಲಾವಣೆ

ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮಡಿಕೇರಿ ಪ್ರವಾಸ ದಿಢೀರ್ ರದ್ದಾಗಿದೆ.

ಇಂದು ಮಧ್ಯಾಹ್ನ ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ ಗೆ ಬಂದಿಳಿದ ಸೋನಿಯಾ ಗಾಂಧಿ ಅಲ್ಲಿಂದ ನೇರವಾಗಿ ಮಡಿಕೇರಿಯ ರೆಸಾರ್ಟ್ ಗೆ ತೆರಳಬೇಕಿತ್ತು. ಎರಡು ದಿನಗಳ ಕಾಲ ಕೂರ್ಗ್ ನ ಖಾಸಗಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯಲಿದ್ದರು. ಆದರೆ ಸೋನಿಯಾ ಗಾಂಧಿ ಮೈಸೂರಿಗೆ ಆಗಮಿಸುತ್ತಿದ್ದಂತೆ ಅವರ ಮಡಿಕೇರಿಯ ಪ್ರವಾಸ ರದ್ದಾಗಿದೆ. ದಿಢೀರ್ ಆಗಿ ಅವರ ವಾಸ್ತವ್ಯದಲ್ಲಿ ಬದಲಾವಣೆ ಮಾಡಲಾಗಿದೆ.

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ವಿಮಾನ ಹಾರಾಟಕ್ಕೆ ಅನುಕೂಲಕರ ವಾತಾವರಣವಿಲ್ಲದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಮಡಿಕೇರಿ ಪ್ರವಾಸ ರದ್ದಾಗಿದ್ದು, ಮೈಸೂರಿನ ಕಬಿನಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.

ಮಡಿಕೇರಿಯಲ್ಲಿನ ಬಿಜೆಪಿ ಕಾರ್ಯಕರ್ತರ ಮೊಟ್ಟೆ ದಾಳಿ ಪ್ರಕರಣ, ಪ್ರತಿಭಟನೆ ಮೊದಲಾದ ಕಾರಣಗಳಿಂದ ಭದ್ರತಾ ದೃಷ್ಟಿಯಿಂದ ಸೋನಿಯಾ ಗಾಂಧಿ ಅವರ ವಾಸ್ತವ್ಯವನ್ನು ಮಡಿಕೇರಿ ಬದಲಾಗಿ ಮೈಸೂರಿಗೆ ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...