alex Certify BIG NEWS: ಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ; ನೂರು ಬಾರಿ ಸುಳ್ಳು ಹೇಳಿದರೆ ಸತ್ಯವಾಗಲ್ಲ; ವಿಪಕ್ಷ ನಾಯಕನ ವಿರುದ್ಧ ಸಚಿವ ಸೋಮಣ್ಣ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ; ನೂರು ಬಾರಿ ಸುಳ್ಳು ಹೇಳಿದರೆ ಸತ್ಯವಾಗಲ್ಲ; ವಿಪಕ್ಷ ನಾಯಕನ ವಿರುದ್ಧ ಸಚಿವ ಸೋಮಣ್ಣ ವಾಗ್ದಾಳಿ

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ವಸತಿ ಸಚಿವ ವಿ.ಸೋಮಣ್ಣ, ಸುಡುಗಾಡು ಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಮನೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಕಾಲದಲ್ಲಿ ಕೇವಲ ಘೋಷಣೆಗಳು ಮಾತ್ರ ಆಗಿತ್ತು. ಆದರೆ ನಾವು ಮನೆಗಳನ್ನು ಕಟ್ಟಿ ಕೊಡುತ್ತಿದ್ದೇವೆ. ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಎಂಬುದಿಲ್ಲ, ಜನರಿಗೆ ಮನೆ ಸಿಗಬೇಕು ಅಷ್ಟೇ. ಸಿದ್ದರಾಮಯ್ಯ ಕೂಡ ಅವರ ಮನೆಯಿಂದೇನೂ ತಂದುಕೊಟ್ಟಿಲ್ಲ, ನಾವು ಸಹ ನಮ್ಮ ಮನೆಯಿಂದ ತಂದು ಕೊಡುತ್ತಿಲ್ಲ. ಇವರ ಕಾಲದಲ್ಲಿ ನಡೆದ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ ಎಂದು ಹೇಳಿದರು.

ಸಚಿವ ಸೋಮಣ್ಣ ಮನೆಗಳನ್ನು ನೀಡಿಲ್ಲ, ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಎಂದು ಪದೇ ಪದೇ ಆರೋಪ ಮಾಡುವುದನ್ನು, ಸೋಮಣ್ಣ ಅವರನ್ನು ಟಾರ್ಗೆಟ್ ಮಾಡುವುದನ್ನು ಇನ್ನು ಮುಂದಾದರೂ ನಿಲ್ಲಿಸಿ. ನೂರು ಬಾರಿ ಸುಳ್ಳು ಹೇಳಿದ ಮಾತ್ರಕ್ಕೆ ಸುಳ್ಳು ಸತ್ಯವಾಗಿಬಿಡಲ್ಲ ಎಂದು ಗುಡುಗಿದ್ದಾರೆ.

ಸಿದ್ದರಾಮಯ್ಯನವರೇ ನಾನು, ನೀವು ಇಬ್ಬರೂ ಒಂದೇ ಗರಡಿಯಲ್ಲಿ ಇದ್ದವರು, ನಿಮ್ಮ ಅದೃಷ್ಣದಿಂದ ಮುಖ್ಯಮಂತ್ರಿಯಾಗಿದ್ದೀರಿ. ನನಗೂ ಕೂಡ ಎಲ್ಲಾ ಅರ್ಹತೆಗಳು ಇವೆ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...