alex Certify BIG NEWS: ಸಿಎಂ ಬದಲಾವಣೆ ಎಂದು ಟ್ವೀಟ್ ಮಾಡಲು ಕಾಂಗ್ರೆಸ್ ನವರು ಯಾರು?; ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಎಂ ಬದಲಾವಣೆ ಎಂದು ಟ್ವೀಟ್ ಮಾಡಲು ಕಾಂಗ್ರೆಸ್ ನವರು ಯಾರು?; ಗೃಹ ಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ

ರಾಯಚೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಗಿಮಿಕ್ ರಾಜಕಾರಣ ಮಾಡಲು ಹೊರಟಿದ್ದಾರೆ. ಇಂತಹ ಗಿಮಿಕ್ ಗಳನ್ನು ರಾಜ್ಯದ ಜನರು ಒಪ್ಪುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್ ನಾಯಕರು ಗಿಮಿಕ್ ಮಾಡಿಕೊಂಡು ರಾಜಕಾರಣದಲ್ಲಿ ಬೆಳೆದವರು. ರಾಜ್ಯದ ಜನತೆ ಇದನ್ನು ಒಪ್ಪಲ್ಲ. ಸುಳ್ಳು ಹೇಳಿ ಟ್ವೀಟ್ ಮಾಡಿದ್ದಾರೆ. ಇವರೆಲ್ಲ ನಾಯಕರಾ? ಇದು ಲೀಡರ್ ಗುಣಗಳಾ? ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಎಂದು ಹೇಳಿದ್ದು ಯಾರು? ಸಿಎಂ ಬದಲಾವಣೆ ಮಾಡುವವರು ಕಾಂಗ್ರೆಸ್ ನವರಾ? ಸಿಎಂ ಬದಲಾವಣೆ ಬಗ್ಗೆ ಟ್ವೀಟ್ ಮಾಡಲು ಕಾಂಗ್ರೆಸ್ ನವರು ಯಾರು? ಏನೋ ಗಿಮಿಕ್ ಗಳನ್ನು ಮಾಡಿ ಬೆಳೆಯಬೇಕು ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...