alex Certify BIG NEWS: ಸಮಸ್ಯೆ ಹೇಳಿಕೊಂಡ ಮಹಿಳೆ ವಿರುದ್ಧವೇ ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮಸ್ಯೆ ಹೇಳಿಕೊಂಡ ಮಹಿಳೆ ವಿರುದ್ಧವೇ ದೂರು ದಾಖಲು

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬಳಿ ಸಮಸ್ಯೆ ಹೇಳಿಕೊಂಡು ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆ ವಿರುದ್ಧವೇ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿರುವ ಘಟನೆ ನಡೆದಿದೆ.

ಶಾಸಕ ಅರವಿಂದ ಲಿಂಬಾವಳಿ ವರ್ತೂರು ಕೆರೆ ಕೋಡಿ ವೀಕ್ಷಣೆಗೆ ತೆರಳಿದ್ದ ವೇಳೆ ಮಹಿಳೆ ರೂತ್ ಮೇರಿ ಎಂಬುವವರು ಮನವಿ ಪತ್ರ ಹಿಡಿದು ಬಂದಿದ್ದರು ಮಹಿಳೆ ಮನವಿ ಪತ್ರ ಕಸಿದುಕೊಂಡ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯನ್ನು ನಿಂದಿಸಿ ಬೈದು ಕಳುಹಿಸಿದ್ದರು. ಇದೀಗ ಮಹಿಳೆ ವಿರುದ್ಧ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ಆರೋಪದಡಿ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಬಿಎಂಪಿ ಕಂದಾಯ ಅಧಿಕಾರಿ ಪಾರ್ಥ ಸಾರಥಿ ಎಂಬುವವರಿಂದ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...