alex Certify BIG NEWS: ಸಚಿವ ನವಾಬ್ ಮಲ್ಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖಡೆ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿವ ನವಾಬ್ ಮಲ್ಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖಡೆ ತಂದೆ

ಮುಂಬೈ: ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖಡೆ ತಂದೆ ಧ್ಯಾನ್ ದೇವ್ ಕಚ್ರುಜಿ ವಾಂಖಡೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ.

ನವಾಬ್ ಮಲಿಕ್ ಸಮೀರ್ ವಾಂಖಡೆ ಕುಟುಂಬವನ್ನು ವಂಚಕರ ಕುಟುಂಬ ಎಂದು ಕರೆದಿದ್ದು, ಅವರ ಧರ್ಮದ ಬಗ್ಗೆಯೂ ಪ್ರಶ್ನಿಸಿದ್ದಾರೆ. ಸಮೀರ್ ವಾಂಖಡೆ ಇಡೀ ಕುಟುಂಬದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ನವಾಬ್ ಮಲ್ಲಿಕ್ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಧ್ಯಾನ್ ದೇವ್ ವಾಂಖಡೆ 1.25 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

‘ಪುನೀತ್ ನಮನ’ ಕಾರ್ಯಕ್ರಮಕ್ಕೆ ಚಂದಾ ವಸೂಲಿ ಆರೋಪ; ಸ್ಪಷ್ಟನೆ ನೀಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್

ಸಮೀರ್ ವಾಂಖಡೆ ಕುಟುಂಬದ ಸಾಮಾಜಿಕ ಗೌರವ, ಕುಟುಂಬದ ಹೆಸರಿಗೆ ಹಾನಿಯುಂಟುಮಾಡಿದ್ದು, ಎಂದಿಗೂ ಸರಿಪಡಿಸಲಾಗದ ನಷ್ಟವುಂಟಾಗಿದೆ. ನವಾಬ್ ಮಲ್ಲಿಕ್ ಹಾಗೂ ಅವರ ಪಕ್ಷದವರು ವಾಂಖಡೆ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ನವಾಬ್ ಮಲ್ಲಿಕ್ ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಟಿವಿ, ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣ, ಟ್ವಿಟರ್ ನಲ್ಲಿ ವರದಿಯಾಗಿದ್ದು ಅವುಗಳನ್ನು ತಕ್ಷಣ ಡಿಲಿಟ್ ಮಾಡಬೇಕು. ಉಳಿದ ಪ್ರಕರಣಗಳ ತೀರ್ಪು ಹೊರಬರುವವರೆಗೂ ಈ ಕುರಿತ ಯಾವುದೇಸುದ್ದಿ ಪ್ರಸಾರ ಮಾಡದಂತೆ ತಡೆಯೊಡ್ಡುವಂತೆಯೂ ದ್ಯಾನ್ ದೇವ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...