alex Certify BIG NEWS: ಶಿಕ್ಷಕಿ ಬರ್ಬರ ಹತ್ಯೆ; ನಗರಸಭೆ BJP ಸದಸ್ಯೆ ಸೇರಿ ನಾಲ್ವರ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿಕ್ಷಕಿ ಬರ್ಬರ ಹತ್ಯೆ; ನಗರಸಭೆ BJP ಸದಸ್ಯೆ ಸೇರಿ ನಾಲ್ವರ ಬಂಧನ

ಮೈಸೂರು: ಶಿಕ್ಷಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಬಿಜೆಪಿ ಸದಸ್ಯೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಗಾಯತ್ರಿ ಮುರುಗೇಶ್ ಬಂಧಿತ ನಗರಸಭೆ ಸದಸ್ಯೆ, ನಂಜನಗೂಡು ಶಿಕ್ಷಕಿ ಸುಲೋಚನ ಎಂಬುವವರನ್ನು ಸುಪಾರಿಕೊಟ್ಟು ಗಾಯತ್ರಿ ಮುರುಗೇಶ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

6 ತಿಂಗಳ ಹಿಂದೆ ನಂಜನಗೂಡಿನ ಮೊರಾರ್ಜಿ ವಸತಿ ಶಾಲಾ ಶಿಕ್ಷಕಿ ಸುಲೋಚನ, ನಂಜನಗೂಡು ಮಹದೇಶ್ವರ ಬಡಾವಣೆಯಲ್ಲಿ ಕೊಲೆಯಾಗಿದ್ದರು. ಸುಲೋಚನ ಪತಿ 7 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ಸುಲೋಚನ ಒಂಟಿಯಾಗಿ ವಾಸವಾಗಿದ್ದರು. ನಗರಸಭೆ ಸದಸ್ಯೆ ಗಾಯತ್ರಿ ಪತಿ ಮುರುಗೇಶ್, ಸುಲೋಚನ ಜತೆ ಸಲುಗೆಯಿಂದ ಇದ್ದ ಎನ್ನಲಾಗಿದೆ. ಪತಿಯೊಂದಿಗೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿರುವ ಅನುಮಾನದ ಮೇರೆಗೆ ಗಾಯತ್ರಿ ಸುಪಾರಿ ಕೊಟ್ಟು ಶಿಕ್ಷಕಿಯನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯೆ ಸೇರಿದಂತೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...