alex Certify BIG NEWS: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ..!

ರಾಜ್ಯದ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಹೆಮ್ಮೆ ಪಡುವಂತ ಸಂತಸದ ಸುದ್ದಿ ಹೊರಬಿದ್ದಿದೆ. ಪ್ರತಿವರ್ಷದಂತೆ ಈ ವರ್ಷವು ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ, ರಾಷ್ಟ್ರಪತಿ ಪದಕ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಈ ಸಮಾರಂಭದಲ್ಲಿ ಕರ್ನಾಟಕ‌ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಸಿವಿಲ್, ಸೈಬರ್ ಕ್ರೈಮ್, ಲೋಕಾಯುಕ್ತ ಸೇರಿದಂತೆ ಕಾರ್ಯಕ್ರಮದಲ್ಲಿ 19 ಅಧಿಕಾರಿಗಳು ಪ್ರಶಸ್ತಿ ಪಡೆಯಲಿದ್ದಾರೆ.

ಗುಪ್ತಚರ ಇಲಾಖೆಯ ಎಡಿಜಿಪಿ ಬಿ ದಯಾನಂದ್, ಕ್ರೈಮ್ ಆಂಡ್ ಟೆಕ್ನಿಕಲ್ ಸರ್ವೀಸ್ ನ ಎಡಿಜಿಪಿ ಆರ್. ಹಿತೇಂದ್ರ, ಬೆಂಗಳೂರಿನ ಸಂಚಾರಿ ಪೊಲೀಸರ ಜಂಟಿ ಪೊಲೀಸ್ ಆಯುಕ್ತ ಬಿ. ಆರ್. ರವಿಕಾಂತೇಗೌಡ, ಕೆಎಸ್ ಆರ್ಪಿ 5ನೇ ಬೆಟಾಲಿಯನ್ ನ ಕಮಾಂಡೆಂಟ್ ರಾಮಯ್ಯ ಜನಾರ್ಧನ್, ಹಲಸೂರು ಉಪವಿಭಾಗದ ಎಸಿಪಿ ಕುಮಾರ ಡಿ, ಹುಣಸೂರು ಉಪವಿಭಾಗದ ಡಿಎಸ್ಪಿ ಪ್ರಭುದೇವ್ ರವಿಪ್ರಸಾದ್, ಸಿಂದನೂರು ಡಿಎಸ್ಪಿ ವೆಂಕಟಪ್ಪ ನಾಯಕ‌ ಓಲೇಕರ್, ಆನೇಕಲ್ ಉಪವಿಭಾಗದ ಡಿಎಸ್ಪಿ ಮಲ್ಲೇಶಯ್ಯ ಎಂ, ಸೈಬರ್ ಕ್ರೈಮ್ ಸಿಐಡಿ ಡಿಎಸ್ಪಿ ಯಶವಂತಕುಮಾರ್, ಕಲಬುರಗಿ ಸಿಸಿಆರ್ಬಿ ಎಸಿಪಿ ಗಂಗಾಧರ್ ಮಠಪತಿ, ಕರ್ನಾಟಕ ಲೋಕಾಯುಕ್ತ ಡಿಎಸ್ಪಿ ಕೆ.ಎಂ. ರಮೇಶ್, ಸಿಐಡಿಯ ಡಿಎಸ್ಪಿ ಎಸ್.ಬಿ. ಕೆಂಪಯ್ಯ, ಲೋಕಾಯುಕ್ತ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಎಸ್, ಕೆಎಸ್ಆರ್ಪಿ 1ನೇ ಬೆಟಾಲಿಯನ್ ಸಿ ಎಸ್ ಸಿಂಪಿ, ಬೆಳಗಾವಿಯ ಎಆರ್ಎಸ್ಐನ ಡಿಎಆರ್ ಮಹಮ್ಮದ್ ಹನೀಫ್, ಬೆಂಗಳೂರಿನ ಜಂಟಿ ಸಿಪಿ ಕಚೇರಿಯ ಎಎಸ್ಐ ಎಂ ಹೆಚ್ ರೇವಣ್ಣ ಸೇರಿ ಒಟ್ಟು 19 ಜನರಿಗೆ ರಾಷ್ಟ್ರಪತಿ ಪದಕ ದೊರೆತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...