alex Certify BIG NEWS: ರಾಜ್ಯದಲ್ಲಿ ಶುರುವಾಯ್ತು ಆಜಾನ್ V/S ಭಜನೆ ವಾರ್; ಹಿಂದೂ ಸಂಘಟನೆಗಳಿಂದ ಹೊಸ ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಶುರುವಾಯ್ತು ಆಜಾನ್ V/S ಭಜನೆ ವಾರ್; ಹಿಂದೂ ಸಂಘಟನೆಗಳಿಂದ ಹೊಸ ಅಭಿಯಾನ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್ ಬಳಿಕ ಇದೀಗ ಆಜಾನ್ ವಿವಾದ ಆರಂಭವಾಗಿದ್ದು, ಮಸೀದಿಗಳಲ್ಲಿನ ಧ್ವನಿವರ್ಧಕದ ವಿರುದ್ಧ ಹೊಸ ಅಭಿಯಾನ ಆರಂಭಿಸುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಮಸೀದಿಗಳಲ್ಲಿನ ಧ್ವನಿ ವರ್ಧಕಗಳನ್ನು ತೆಗೆಸುವಂತೆ ರಾಜ್ಯ ಸರ್ಕಾರಕ್ಕೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ. ಒಂದು ವೇಳೆ ಧ್ವನಿವರ್ಧಕ ನಿಷೇಧಿಸದಿದ್ದರೆ ದೇವಾಲಯಗಳಲ್ಲಿ ಜೈ ಶ್ರೀರಾಮ್, ಓಂ ನಮಃ ಶಿವಾಯ ಪಠಿಸುವುದಾಗಿ ತಿಳಿಸಿದೆ.

ಮಸೀದಿಗಳಲ್ಲಿ ಅಲ್ಲಾಹು ಅಕ್ಬರ್ ಎಂದು ಆಜಾನ್ ಕೂಗಿದರೆ ಮಂದಿರಗಳಲ್ಲಿ ಮೈಕ್ ಮೂಲಕ ಓಂ ನಮಃ ಶಿವಾಯ, ಜೈ ಶ್ರೀರಾಮ್ ಹೇಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ನಾಳೆ ಬೆಳಿಗ್ಗೆ 5 ಗಂಟೆಗೆ ಯಲಹಂಕದ ಆಂಜನೇಯ ದೇವಸ್ಥಾನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...