alex Certify BIG NEWS: ರಮೇಶ್ ಜಾರಕಿಹೊಳಿ ನಡೆ ನಿಗೂಢ; ಸುತ್ತೂರು ಶ್ರೀ ಭೇಟಿ ಬಳಿಕ ನಿರ್ಧಾರ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಮೇಶ್ ಜಾರಕಿಹೊಳಿ ನಡೆ ನಿಗೂಢ; ಸುತ್ತೂರು ಶ್ರೀ ಭೇಟಿ ಬಳಿಕ ನಿರ್ಧಾರ ಪ್ರಕಟ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಂದೆಡೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಬೆದರಿಕೆಯೊಡ್ಡುತ್ತಿದ್ದು, ಇನ್ನೊಂದೆಡೆ ಮತ್ತೆ ಸಚಿವ ಸ್ಥಾನ ಮರಳಿ ಪಡೆಯುವ ಬಗ್ಗೆಯೂ ಒತ್ತಡ ತಂತ್ರ ಹೆಣೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸುತ್ತೂರು ಶ್ರೀಗಳನ್ನು ಭೇಟಿ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ಗೋಕಾಕ್ ನಿಂದ ಮೈಸೂರಿಗೆ ಹೊರಟಿರುವ ರಮೇಶ್ ಜಾರಕಿಹೊಳಿ ಸುತ್ತೂರು ಮಠಕ್ಕೆ ತೆರಳಿ ಸುತ್ತೂರು ಶ್ರೀಗಳನ್ನು ಭೇಟಿಯಾಗಲಿದ್ದಾರೆ. ಭೇಟಿ ಬಳಿಕ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನೂ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದೆಡೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಸ್ತ್ರ ಪ್ರಯೋಗಿಸಿರುವ ರಮೇಶ್ ಜಾರಕಿಹೊಳಿ ಇನ್ನೊಂದೆಡೆ ಸಚಿವ ಸ್ಥಾನ ಪಡೆಯುವುದಕ್ಕೂ ಒತ್ತಡ ಹೇರುತ್ತಿದ್ದಾರೆ. ಒಟ್ಟಾರೆ ಸುತ್ತೂರು ಶ್ರೀಗಳ ಭೇಟಿ ಬಳಿಕ ರಮೇಶ್ ನಿರ್ಧಾರವೇನೆಂಬುದು ಪ್ರಕಟವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...