alex Certify BIG NEWS: ಯಾರೋ ನಾಲ್ಕು ಜನ ಸರ್ಕಾರ ಉರುಳಿಸಲು ಸರ್ಕಾರ ಏನು ಕಡ್ಡಿ ಮೇಲೆ ನಿಂತಿದ್ಯಾ?; ಸಿ.ಪಿ.ಯೋಗೇಶ್ವರ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯಾರೋ ನಾಲ್ಕು ಜನ ಸರ್ಕಾರ ಉರುಳಿಸಲು ಸರ್ಕಾರ ಏನು ಕಡ್ಡಿ ಮೇಲೆ ನಿಂತಿದ್ಯಾ?; ಸಿ.ಪಿ.ಯೋಗೇಶ್ವರ್ ವಾಗ್ದಾಳಿ

ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಕುಮಾರಸ್ವಾಮಿ ವೈಫಲ್ಯದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿತ್ತು. ಹಾಗಂದ ಮಾತ್ರಕ್ಕೆ ಬಿಜೆಪಿ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಸಿ.ಪಿ.ಯೋಗೇಶ್ವರ್, ಯಾರೋ ನಾಲ್ಕು ಜನರಿಂದ ಸರ್ಕಾರ ಉರುಳಿಸಲು ಸಾಧ್ಯವೇ? ನಾಲ್ಕು ಜನರಿಂದ ಸರ್ಕಾರ ಉರುಳಿಸಲು ಸರ್ಕಾರ ಏನು ಕಡ್ಡಿ ಮೇಲೆ ನಿಂತಿದ್ಯಾ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ವೈಫಲ್ಯದಿಂದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿತ್ತು. ಅವರು ಮೋಜು ಮಸ್ತಿ ಮಾಡುತ್ತಿದ್ದರಿಂದ ಸರ್ಕಾರ ಪತನವಾಯ್ತು ಆದರೆ ಇಂದು ಕುಮಾರಸ್ವಾಮಿ ನನ್ನ ಮೇಲೆ ಬೊಟ್ಟು ಮಾಡುವುದರಲ್ಲಿ ಅರ್ಥವಿಲ್ಲ. ಸಮ್ಮಿಶ್ರ ಸರ್ಕಾರ ಯಾಕೆ ಉರುಳಿತು ಎಂದು ಎಲ್ಲರಿಗೂ ಗೊತ್ತಿದೆ ಎಂದರು.

ಹೆಚ್ ಡಿ ಕೆ ಮನಸ್ಸಿಗೆ ಬಂದ ಹಾಗೆ ಮಾತಾಡ್ತಾರೆ. ಒಮ್ಮೆ ಮಳೆ ಆಗಲು ನಾನೇ ಕಾರಣ ಅಂದರು. ಅಂದ ಮೇಲೆ ಮಳೆ ಅನಾಹುತಕ್ಕೂ ಅವರೇ ಕಾರಣರಾಗಬೇಕು. ಹೀಗಾಗಿ ಹೆಚ್ ಡಿ ಕೆ ಮಾತಿಗೆ ಅಷ್ಟು ಗೌರವ ಕೊಡಬೇಕಿಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...