alex Certify BIG NEWS: ಯಾರೇ ಸಿಎಂ ಆಗಿದ್ರೂ ಅವರ ಸಂಪುಟದಲ್ಲಿ ಮಂತ್ರಿಯಾಗುತ್ತಿರಲಿಲ್ಲ; ಮತ್ತೆ ಸ್ಪಷ್ಟಪಡಿಸಿದ ಶೆಟ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯಾರೇ ಸಿಎಂ ಆಗಿದ್ರೂ ಅವರ ಸಂಪುಟದಲ್ಲಿ ಮಂತ್ರಿಯಾಗುತ್ತಿರಲಿಲ್ಲ; ಮತ್ತೆ ಸ್ಪಷ್ಟಪಡಿಸಿದ ಶೆಟ್ಟರ್

ಬೆಂಗಳೂರು: ನಾನು ಬಸವರಾಜ್ ಬೊಮ್ಮಾಯಿ ಸಂಪುಟ ಸೇರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಮಾಜಿ ಸಚಿವ ಜಗದೀಶ್ ಶೆಟ್ಟರ್, ಬೊಮ್ಮಾಯಿ ಮಾತ್ರವಲ್ಲ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ನಾನು ಸಚಿವನಾಗಿ ಮುಂದುವರೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ನಿನ್ನೆ ನೀಡಿದ ಹೇಳಿಕೆಗೆ ಬದ್ಧನಾಗಿದ್ದು, ನಾನು ಈ ಬಾರಿ ಸರ್ಕಾರದಲ್ಲಿ ಸಚಿವನಾಗುವುದಿಲ್ಲ ಎಂದರು. ನಾನು ಸ್ಪೀಕರ್, ರಾಜ್ಯಾಧ್ಯಕ್ಷ, ಸಿಎಂ, ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ನನಗೆ ಎಲ್ಲಾ ರೀತಿಯ ಸ್ಥಾನವನ್ನೂ ನೀಡಿದೆ. ನಾನು ಪಕ್ಷದಲ್ಲಿ ಹಿರಿಯ ನಾಯಕ. ಮುಜುಗರವಾಗುವುದು ಬೇಡ ಎಂಬ ಕಾರಣಕ್ಕೆ ನಾನೇ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ.

132 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಅಟ್ಟಹಾಸ: ವಿಶ್ವಸಂಸ್ಥೆ ವರದಿ

ಹಿಂದೆ ಬಿ ಎಸ್ ವೈ ಮುಖ್ಯಮಂತ್ರಿಯಾಗಿದ್ದರಿಂದ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಇಂದು ಬೊಮ್ಮಾಯಿ ಇರಲಿ ಅಥವಾ ಬೇರೆ ಯಾರೇ ಸಿಎಂ ಆಗಿದ್ದರೂ ನಾನು ಮಂತ್ರಿಯಾಗಿ ಮುಂದುವರೆಯುತ್ತಿರಲಿಲ್ಲ. ನಾನು ಪಕ್ಷದ ಕಾರ್ಯಕರ್ತನಾಗಿ, ಶಾಸಕನಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ. ಇದು ನನ್ನ ಸ್ವಾಭಿಮಾನ ಹಾಗೂ ಗೌರವದ ನಿರ್ಧಾರವಾಗಿದೆ. ನನಗೆ ಬೇರೆ ಯಾವುದೇ ಸ್ಥಾನದ ಆಕಾಂಕ್ಷೆಯೂ ಇಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ವೈ ಹಾಗೂ ಇಂದಿನ ಸಿಎಂ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ. ಹಲವರು ನನ್ನ ತೀರ್ಮಾನವನ್ನು ಮೆಚ್ಚಿದ್ದಾರೆ ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...