alex Certify BIG NEWS: ಮೈಮೇಲೆ ಕಾಂತಾರ ದೇವರು ಬರುತ್ತೆ ಎಂದು ವಂಚನೆ; ಮಹಿಳೆಯ ವಿರುದ್ಧ ದೂರು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೈಮೇಲೆ ಕಾಂತಾರ ದೇವರು ಬರುತ್ತೆ ಎಂದು ವಂಚನೆ; ಮಹಿಳೆಯ ವಿರುದ್ಧ ದೂರು ದಾಖಲು

ಮಂಡ್ಯ: ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಪಡೆದಿದೆ. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ತಮ್ಮ ಮೇಲೆ ಕಾಂತಾರಾ ದೇವರು ಬರುತ್ತಾರೆ ಎಂದು ಜನರನ್ನು ನಂಬಿಸಿ ಮಂಕುಬೂದಿ ಎರಚಿ ವಂಚಿಸುತ್ತಿರುವ ಘಟನೆಯೂ ಬೆಳಕಿಗೆ ಬರುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮೈಮೇಲೆ ಕಾಂತಾರಾ ದೇವರು ಬಂದಿದೆ ಎಂದು ಹೇಳಿ ಅಮಾಯಕ ಜನರಿಗೆ ಮೋಸ ಮಾಡಿ ವಂಚನೆ ಮಾಡುತ್ತಿದ್ದಾಳೆ ಎಂದು ದೂರು ದಾಖಲಾಗಿದೆ.

ಇಲ್ಲಿನ ಮಳವಳ್ಳಿ ತಾಲೂಕಿನ ಪೇಟೆ ಬದಿಯ ನಿವಾಸಿ ಶಿವಲಿಂಗಮ್ಮ ಎಂಬ ಮಹಿಳೆ ತನ್ನ ಮೇಲೆ ದೇವರು ಬರುತ್ತಾರೆ ಎಂದು ಕಾಂತಾರಾ ಸಿನಿಮಾದಲ್ಲಿ ಕೂಗುವಂತೆ ಕೂಗಿ ಜನರನ್ನು ನಂಬಿಸಿ ವಂಚಿಸುತ್ತಿದ್ದಾಳೆ. ಸಮಸ್ಯೆಗೆ ಪರಿಹಾರ ನೀಡುತ್ತೇನೆ ಎಂದು ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ಮಹಿಳೆ ವಿರುದ್ಧ ಮಳವಳ್ಳಿ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...