ಬೆಂಗಳೂರು: ಕೆಂಪೇಗೌಡ ಥೀಮ್ ಪಾರ್ಕ್ ಗಾಗಿ ಪವಿತ್ರ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದ್ದು, ಮೃತ್ತಿಕೆ ಸಂಗ್ರಹ ರಥಯಾತ್ರೆ ವಾಹನದಿಂದ ಕೆಳಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿಯಲ್ಲಿ ನಡೆದಿದೆ.
ಪೂಜಾ ಕುಣಿತ ಕಲಾವಿದ ಶ್ರೀನಿವಾಸ್ (21) ಮೃತ ಯುವಕ. ಮಾಗಡಿ ತಾಲೂಕಿನ ಮರೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಮೃತ ಶ್ರೀನಿವಾಸ್ ಮಾಗಡಿಯ ಬ್ಯಾಡರಹಳ್ಳಿ ನಿವಾಸಿ.
ಕೆಂಪೇಗೌಡ ಥೀಮ್ ಪಾರ್ಕ್ ಗಾಗಿ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಪವಿತ್ರ ಮಣ್ಣು ಸಂಗ್ರಹಕ್ಕಾಗಿ ರಥಯಾತ್ರೆ ನಡೆಯುತ್ತಿದೆ. ಈ ರಥಯಾತ್ರೆ ವೇಳೆ ವಾಹನದಿಂದ ಬಿದ್ದು ಯುವಕ ಕೊನೆಯುಸಿರೆಳೆದಿದ್ದಾನೆ.