alex Certify BIG NEWS: ಮುರುಘಾಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ಹಿಂದಿನ ಆಡಳಿತಾಧಿಕಾರಿಯ ಕೃತ್ಯ; ಮಠದ ಸಲಹಾ ಸಮಿತಿ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುರುಘಾಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ಹಿಂದಿನ ಆಡಳಿತಾಧಿಕಾರಿಯ ಕೃತ್ಯ; ಮಠದ ಸಲಹಾ ಸಮಿತಿ ಆರೋಪ

ಚಿತ್ರದುರ್ಗ: ಮರುಘಾಮಠದ ಡಾ.ಶಿವಕುಮಾರ್ ಶ್ರೀಗಳ ವಿರುದ್ಧ ಮಕ್ಕಳು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಇದು ಮಠದ ಹಿಂದಿನ ಆಡಳಿತಾಧಿಕಾರಿಯ ಕೈವಾಡ ಎಂದು ಮಠದ ಸಲಹಾ ಸಮಿತಿ ಮುಖಂಡರು ಆರೋಪಿಸಿದ್ದಾರೆ.

ಮಠದ ಆಡಳಿತದಲ್ಲಿ ಹೆಚ್ಚಿನ ಅಧಿಕಾರ ನೀಡುವಂತೆ ಹಿಂದಿನ ಆಡಳಿತಾಧಿಕಾರಿ ಬಸವರಾಜ್ ಕೇಳಿದ್ದರು. ಆದರೆ ಹೆಚ್ಚಿನ ಅಧಿಕಾರ ಕೊಟ್ಟಿರಲಿಲ್ಲ. ಇದೇ ಕಾರಣಕ್ಕಾಗಿ ಶ್ರೀಗಳ ವಿರುದ್ಧ ಇಂತಹ ಆರೋಪ ಮಾಡುವ ಕೆಲಸ ಮಾಡಿದ್ದಾರೆ. ಮಕ್ಕಳ ಕೈಲಿ ಶ್ರೀಗಳ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ ಎಂದು ಮಠದ ಸಲಹಾ ಸಮಿತಿ ಮುಖಂಡರು ಆರೋಪಿಸಿದ್ದಾರೆ.

ಇನ್ನು ಮುರುಘಾಶ್ರೀ ಸೇರಿದಂತೆ ಮಠದ ಐವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕಾಯ್ದೆ ಪ್ರಕರಣವನ್ನು ಮೈಸೂರಿನ ನಜರಾಬಾದ್ ಪೊಲೀಸರು ಚಿತ್ರದುರ್ಗದ ಕೋಟೆ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಚಿತ್ರದುರ್ಗದ ಎಸ್ ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...