alex Certify BIG NEWS: ಮಹಿಳಾ ಪಿಎಸ್ಐಯಿಂದ ಕಿರುಕುಳ; ಡೆತ್ ನೋಟ್ ಬರೆದು ಯುವಕ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಿಳಾ ಪಿಎಸ್ಐಯಿಂದ ಕಿರುಕುಳ; ಡೆತ್ ನೋಟ್ ಬರೆದು ಯುವಕ ನಾಪತ್ತೆ

ರಾಯಚೂರು: ಯುವಕನೊಬ್ಬ ಮಹಿಳಾ ಪಿಎಸ್ಐ ವಿರುದ್ಧ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಸಿರಿವಾರ ಠಾಣೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಯುವಕ ತಾಯಣ್ಣ ಏಕಾಏಕಿ ನಾಪತ್ತೆಯಾಗಿದ್ದಾನೆ. ಪಿಎಸ್ಐ ತನ್ನನ್ನು ಅನಗತ್ಯವಾಗಿ ಮೂರು ತಿಂಗಳಿಂದ ಠಾಣೆಗೆ ಕರೆದು ವಿಚಾರಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆ. ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟಿರುವ ತಾಯಣ್ಣ ನಾಪತ್ತೆಯಾಗಿದ್ದಾನೆ.

ಸಂಬಂಧಿಕರ ಜಮೀನಿನ ಭತ್ತ ಕಟಾವು ಮಾಡಿದ ಆರೋಪ ತಾಯಣ್ಣ ಮೇಲೆ ಬಂದಿತ್ತು. ದೂರು ದಾಖಲಾದ ಹಿನ್ನೆಲೆಯಲ್ಲಿ ತಾಯಣ್ಣನನ್ನು ಠಾಣೆಗೆ ಕರೆದೊಯ್ದಿದ್ದ ಪಿಎಸ್ಐ ಗೀತಾಂಜಲಿ ಬಹಳ ಸಮಯದವರೆಗೆ ಸೆಲ್ ನಲ್ಲಿ ಕೂರಿಸಿದ್ದರು. ಇದೀಗ ಠಾಣೆಯಿಂದ ಹೊರ ಬಂದ ಯುವಕ ತನ್ನ ಸಾವಿಗೆ ಪಿಎಸ್ಐ ಕಾರಣ ಎಂದು ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಯುವಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...