alex Certify BIG NEWS: ಮಠಾಧೀಶರು ದೇವರೆಂದು ಭಾವಿಸುತ್ತೇವೆ; ಶ್ರೀಗಳ ವಿರುದ್ಧ ಆರೋಪ ಸುಳ್ಳಾಗಲಿ ಎಂದ ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಠಾಧೀಶರು ದೇವರೆಂದು ಭಾವಿಸುತ್ತೇವೆ; ಶ್ರೀಗಳ ವಿರುದ್ಧ ಆರೋಪ ಸುಳ್ಳಾಗಲಿ ಎಂದ ಈಶ್ವರಪ್ಪ

ಮಂಗಳೂರು: ಮುರುಘಾಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶೀಗಳ ವಿರುದ್ಧ ಆರೋಪ, ಬಂಧನ ಇದು ದುರದೃಷ್ಟಕರ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಈಶ್ವರಪ್ಪ, ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು, ಅವರ ಬಂಧನ ದುರದೃಷ್ಟಕರ. ಮಠಾಧೀಶರು, ಸ್ವಾಮೀಜಿಗಳನ್ನು ದೇವರೆಂದು ಭಾವಿಸುವ ಸಂಸ್ಕೃತಿ ನಮ್ಮದು. ಅವರ ವಿರುದ್ಧದ ಆರೋಪಗಳು ಸುಳ್ಳಾಗಲಿ ಎಂದು ಅಂದುಕೊಳ್ಳುತ್ತೇನೆ ಎಂದರು.

ನಮ್ಮ ರಾಜ್ಯ ಮತ್ತು ದೇಶದಲ್ಲಿ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ ಸ್ವಾಮೀಜಿಗಳ ಪಾದ ತೊಳೆದ ನೀರನ್ನು ತೀರ್ಥ ಎಂದು ಸ್ವೀಕರಿಸುವ ಸಂಸ್ಕೃತಿ ನಮ್ಮದು. ಶ್ರೀಗಳ ವಿರುದ್ಧದ ಆರೋಪ ಸುಳ್ಳಾಗಲಿ ಎಂದು ಭಾವಿಸುತ್ತೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...