alex Certify BIG NEWS: ಬೆಂಗಳೂರು: ಭಾರಿ ಮಳೆಗೆ ಕುಸಿದ ರಸ್ತೆ; ನಡುರಸ್ತೆಯಲ್ಲೇ ಸುರಂಗ ಸೃಷ್ಟಿ; ಹಲವೆಡೆ ಕೊಚ್ಚಿ ಹೋದ ಮಾರ್ಗಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರು: ಭಾರಿ ಮಳೆಗೆ ಕುಸಿದ ರಸ್ತೆ; ನಡುರಸ್ತೆಯಲ್ಲೇ ಸುರಂಗ ಸೃಷ್ಟಿ; ಹಲವೆಡೆ ಕೊಚ್ಚಿ ಹೋದ ಮಾರ್ಗಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅವಾಂತರಗಳು ಸೃಷ್ಟಿಯಾಗಿವೆ. ನಡು ರಸ್ತೆಯೇ ಕುಸಿದು ಹೋಗಿದ್ದು, ಬಾವಿಯಂತಾದ ಘಟನೆ ಪಟ್ಟೆಗಾರ ಪಾಳ್ಯದಲ್ಲಿ ನಡೆದಿದೆ.

ನಡು ರಸ್ತೆಯಲ್ಲಿ ಆಳುದ್ದ ಬಾವಿಯಂತೆ ರಸ್ತೆ ಕುಸಿದು ಹೋಗಿದ್ದು, ಸುರಂಗ ಸೃಷ್ಟಿಯಾಗಿದೆ. ರಸ್ತೆ ಕುಸಿದ ಜಾಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಇನ್ನೊಂದೆಡೆ ಆನಂದರಾವ್ ಸರ್ಕಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ಧಾರಾಕಾರ ಮಳೆಗೆ ಕಿತ್ತು ಹೋಗಿದೆ.

ಮತ್ತೊಂದೆಡೆ ಶಿವಾನಂದ ರೈಲ್ವೆ ಅಂಡರ್ ಪಾಸ್ ಬಳಿ 100 ಮೀಟರ್ ನಷ್ಟು ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...